2015 ಅ.31 ರ ವೇಳೆಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದು ಸುಸ್ತಿ ದಾರರಾಗಿರುವ ರೈತರು ಸಾಲ ಪಾವತಿಸಬೇಕು. ಅದು ಮುಂದಿನ ವರ್ಷ ಮಾರ್ಚ್ 31ರ ಒಳಗೆ ಪಾವತಿಸಿದರೆ ಮಾತ್ರ ಅವರಿಗೆ ಈ ಸೌಲಭ್ಯ ಸಿಗುತ್ತದೆ. ಒಂದು ವೇಳೆ ರೈತರ ಆತ್ಮಹತ್ಯೆ ಹೆಚ್ಚಾಗಿ ಬರ ಪರಿಸ್ಥಿತಿ ಹೆಚ್ಚಾದರೂ ರೈತರು ಸಾಲದ ಹಣ ತುಂಬುವ ಅವಧಿಯನ್ನು ಮಾರ್ಚ್ ನಂತರ ಮತ್ತೆ ಮೂರು ತಿಂಗಳು ವಿಸ್ತರಿಸುವ ಚಿಂತನೆ ಮಾಡಲಾಗುತ್ತದೆ ಎಂದು ವಿವರಿಸಿದರು. ಸದ್ಯ ರಾಜ್ಯದಲ್ಲಿ ರೈತರಿಗೆ ರು.536 ಕೋಟಿ ಸುಸ್ತಿ ಸಾಲವಿದ್ದು, ಇದರ ಮೇಲೆ ರು. 220 ಕೋಟಿ ಬಡ್ಡಿ ಇದೆ.