ಮಾನವ ಸರಪಳಿ: ಇಲ್ಲಿನ ಪ್ರವಾಸಿ ಮಂದಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ತಡೆಯಲಾಯಿತು. ಕೆಲಕಾಲ ವಾಹನ ಚಾಲಕರೊಂದಿಗೆ ವಾಗ್ವಾದ ನಡೆದ ಹಿನ್ನೆ ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದಾ ಗಿಜಿಗುಡುತ್ತಿದ್ದ ಬಸ್ನಿಲ್ದಾಣದಲ್ಲಿ ಪಿಎಸೈ ಜಗದೀಶ್ ಅವರ ಭಾವಚಿತ್ರವನ್ನು ರಸ್ತೆಯಲ್ಲಿಟ್ಟು ಶ್ರದಾಟಛಿಂಜಲಿ ಸಲ್ಲಿಸಲಾಯಿತು. ಇಲ್ಲಿನ ಕೊಂಗಾಡಿಯಪ್ಪ ಮುಖ್ಯ ರಸ್ತೆಯಲ್ಲಿರುವ ನಗರ ಪೊಲೀಸ್ ಹಳೆಯ ಠಾಣೆ ಮುಂದೆ ಸಾರ್ವಜನಿಕರು ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ ವೃತ್ತ, ಶಾಂತಿ ನಗರ, ತಾಲೂಕು ಕಚೇರಿ ವೃತ್ತ, ಕಾಲೇಜು ರಸ್ತೆ, ಸಂಜಯ ನಗರ, ರಂಗಪ್ಪವೃತ್ತ, ಪಾಲನಜೋಗಳ್ಳಿ ಮತ್ತಿತರಪ್ರದೇಶಗಳಲ್ಲಿ ಧರಣಿ, ಪ್ರತಿಭಟನೆಗಳು ನಡೆದವು. ಪೊಲೀಸ್ ಠಾಣೆಯಲ್ಲಿ ಮಾತ್ರ ಸ್ಮಶಾನ ಮೌನ ಆವರಿಸಿತ್ತು.