ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ ಶ್ರುತಿ, ಸಿಇಟಿಯಲ್ಲಿ ರ್ಯಾಂಕ್ ಪಡೆದಿದ್ದಳು. ನಾನು ಅವಿದ್ಯಾವಂತನಾಗಿದ್ದು, ಹೂವು ಮಾರಿ ನನ್ನ ಮಕ್ಕಳನ್ನು ಓದಿಸಿದ್ದೆ. ಶ್ರುತಿ 1ನೇ ತರಗತಿ ಓದುತ್ತಿರಬೇಕಾದರೆ, ಶಾಲೆಯ ಶುಲ್ಕ ಕಟ್ಟದೇ ಆಕೆಯನ್ನು ಕಳುಹಿಸಿಬಿಟ್ಟಿದ್ದರು, ಅವಳನ್ನು ತರಗತಿಯಿಂದ ಹೊರಗಡೆ ನಿಲ್ಲಿಸಿದ್ದರು, ಅದೇ ರೀತಿ 9 ತರಗತಿ ಓದಬೇಕಾದರೂ ಶುಲ್ಕ ಕಟ್ಟಿಲ್ಲ ಎಂದು ಶಾಲೆಯಿಂದ ಕಳುಹಿಸಿದ್ದರು. ಆದರೆ, ಎಂದಿಗೂ ಮಗಳು ನಮ್ಮನ್ನು ದೂಡಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಿಮಿಂಗ್ ನಲ್ಲಿ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಳು ಎಂದು ಗುರುಪ್ರಕಾಶ್ ದುಃಖತಪ್ತರಾದರು.