ಯಲ್ಲಮ್ಮದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ

ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಥಣಿ: ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ಕೊಕಟನೂರಿನ ಯಲ್ಲಮ್ಮ ದೇವಿಯ ಜಾತ್ರೆ ಆರಂಭವಾಗಿತ್ತು.

ಆರಂಭದ ಎರಡು ದಿನ ಪ್ರಾಣಿ ಬಲಿ, ನೈವೇದ್ಯ ಇರಲಿಲ್ಲ. ಆದರೆ ಗುರುವಾರ ಪೊಲೀಸರು ಹಾಗೂ ಪ್ರಾಣಿ ದಯಾ ಸಂಘದವರ ಕಣ್ಣು ತಪ್ಪಿಸಿ ಮಾತಂಗಿ ದೇವಿಗೆ ಪ್ರಾಣಿ ಮಾಂಸ ನೈವೇದ್ಯ ಮಾಡಿದರು. ದೇವಾಲಯದ ಮುಂಭಾಗ ಅಥವಾ ಹತ್ತಿರದಲ್ಲಿ ಪ್ರಾಣಿ ಬಲಿ ನಡೆದಿಲ್ಲ.

ಬದಲು ಸ್ವಲ್ಪ ದೂರದಲ್ಲಿ ದೂರದ ಗ್ರಾಮಗಳಿಂದ ಬಂದ ಜನರು ಟೆಂಟ್ ಹಾಕಿಕೊಂಡು ಅಲ್ಲಿಯೇ ಪ್ರಾಣಿ ಬಲಿ ನಡೆಸಿ ಮಾತಂಗಿ ದೇವಿಗೆ ನೈವೇದ್ಯ ಅರ್ಪಿಸಿದರು. ದೂರದ ಹೊಲಗಳಲ್ಲಿ, ವಾಹನ ನಿಲ್ಲಿಸುವ ಸ್ಥಳಗಳಲ್ಲಿ ಪ್ರಾಣಿ ಬಲಿ ಮಾಡಲಾಗಿದ್ದು, ಅಲ್ಲಲ್ಲಿ ರಕ್ತವೂ ಬಿದ್ದಿದೆ. ಮಾಂಸಗಳನ್ನು ನೇತು ಹಾಕಿದ ದೃಶ್ಯಗಳೂ ಪತ್ರಕರ್ತರ ಕಣ್ಣಿಗೆ ಬಿದ್ದವು. ಆದರೆ ಇದನ್ನು ತಡೆಯಬೇಕಾದ ತಾಲೂಕು ಆಡಳಿತದ ಯಾವ ಅಧಿಕಾರಿಯೂ ಅಲ್ಲಿ ಇರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com