ಕ್ಷಾತ್ರ ಧರ್ಮವನ್ನು ಎಲ್ಲಿ ಹೇಗೆ ಒಳಗೊಳಿಸಬೇಕೆನ್ನುವಲ್ಲ ಗೊಂದಲವಿದೆ. ನಮ್ಮ ಮೇಲೆ ದಂಡೆತ್ತಿ ಬಂದೋರಿಗೆ ಈ ಆಲೋಚನೆ ಇರಲಿಲ್ಲ. ಆದರೆ ನಮ್ಮೊಳಗೇ ಇತ್ತು. ನೆಹರೂ ಅಧಿಕಾರಕ್ಕೆ ಬಂದಾಗ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಆಜಾದ್ ಅವರನ್ನು ಮಾಡಿದರು. ನಮ್ಮ ಪಠ್ಯ ಪುಸ್ತಕದೊಳಗೆ ನಮ್ಮ ಇತಿಹಾಸವನ್ನು ನೋಡುವಂಥ ಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ವಸ್ತುನಿಷ್ಠವನ್ನಾಗಿ ಮಾಡಿದರು. ಇದು ನಮ್ಮ ಜನರಿಗೆ ಅರ್ಥವಾಗಲಿಲ್ಲ. ಇಂದು ನಾವು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದವೆಂದು ಪ್ರಚಾರ ಮಾಡುತ್ತಿದ್ದೇವೆ. ಇದೆಲ್ಲಾ ಸುಳ್ಳು, ಆಡಳಿತಗಾರರು ಭಾರತೀಯ ಧರ್ಮ, ಸಂಸ್ಕೃತಿಯನ್ನೆಲ್ಲಾ ಒಂದೊಂದಾಗಿ ತಿರುಚಿದರು. ಕಮ್ಯುನಿಷ್ಟರು ಹೇಳಿದ್ದೇ ಸತ್ಯವೆಂಬಂತೆ ನಡೆದರು. ಹಾಗಾಗಿ ದೇಶದಲ್ಲಿ ಡಿಸ್ಕವರಿ ಇನ್ ಇಂಡಿಯಾ 25 ವರ್ಷಗೊಳಗೆ ಡಿಸ್ಕವರಿ ಅವರ್ ಕಂಟ್ರಿಯಾಗಿಎಲ್ಲ ಕ್ಷೇತ್ರವೂ ಉಲ್ಟಾ ತಿರುಗಿದವು ಎಂದರು.