ಒಂದೇ ಕುಟುಂಬದ ಮೂವರು ನೀರುಪಾಲು

ಕ.ಪ್ರ.ವಾರ್ತೆ ಕನಕಪುರ ಮಾ. 30
ತಾಲೂಕು ಮರಳವಾಡಿ ಹೋಬಳಿ ಕುಂಬಾರದೊಡ್ಡಿ ಗ್ರಾಮದಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ಮೂರುಮಂದಿ ಕೆರೆಯ ನೀರಿನಲ್ಲಿ ಮುಳುಗಿ  ಮೃತಪಟ್ಟ ಮನಕಲಕುವ ಘಟನೆ ನಡೆದಿದೆ.
ಕುಂಬಾರ ದೊಡ್ಡಿಯ ಗಿರಿಜಮ್ಮ (27)ತನ್ನ ಮಗ ಗಿರೀಶ್(9)ಮತ್ತು ನಾದಿನಿ ಮಗ ಅಭಿಷೇಕ್(11) ಜೊತೆ ಬಟ್ಟೆ ಒಗೆಯಲು ಸಮೀಪದ ಕೆರೆಗೆ ತೆರಳಿದ್ದಾಗ  ಘಟನೆ ಸಂಭವಿಸಿದೆ.   ಕೆರೆಯ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಆಳವನ್ನು ಅರಿಯದೆ ಮುಳುಗಿಹೊಗಿದ್ದಾರೆ. ಘಟನೆಯಿಂದ ದಿಗ್ಭ್ರಾಂತಳಾದ ಗಿರಿಜಮ್ಮ ನೆರವಿಗಾಗಿ ಕೂಗಿದರೂ ಯಾರೂ ಜನರಿಲ್ಲದ ಕಾರಣ ತಾನೇ ನೀರಿಗಿಳಿದು ಮಕ್ಕಳನ್ನು ರಕ್ಷಿಸಲು ಮುಂದಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ವೃತ್ತನಿರೀಕ್ಷಕ ನಾಗರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com