ಟ್ರಾನ್ಸ್ಫಾರ್ಮರ್ ಗಲಭೆ ಕೊಲೆಯಲ್ಲಿ ಅಂತ್ಯ

Updated on

ಗೋಕಾಕ: ವಿದ್ಯುತ್ ಪರಿವರ್ತಕ ವಿಚಾರವಾಗಿ ಗೋಕಾಕ ತಾಲೂಕಿನ ಮಹಾನವಮಿ ಗ್ರಾಮದ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಘರ್ಷಣೆ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ಗ್ರಾಮದ ದುಂಡಪ್ಪ ಮಲ್ಲಪ್ಪ ಜಿರತೆ (40) ಹತ್ಯೆಗೀಡಾದಾತ. ಈತನನ್ನು ಕಲ್ಲು ಹೊಡೆದು ಕೊಲೆ ಮಾಡಲಾಗಿದೆ. ಗಾಯಗೊಂಡ 9 ಮಂದಿಯಲ್ಲಿ ಮೂವರ ತಲೆಗೆ ಗಂಭೀರ ಗಾಯವಾಗಿದೆ. ಇನ್ನಿತರರ ಕೈಕಾಲು ಮುರಿದಿವೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
 ಗ್ರಾಮದ ನಾಯಕತ್ವಕ್ಕಾಗಿ ಜಿರತೆ ಮತ್ತು ಮುತಾಳೆ ಕುಟುಂಬಗಳ ನಡುವೆ ಮೊದಲಿನಿಂದಲೂ ಜಗಳವಿತ್ತು. ಹತ್ಯೆಗೀಡಾದ ದುಂಡಪ್ಪನ ಸಹೋದರ ಬಸಪ್ಪ ತನ್ನ ಹೊಲದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟಿದ್ದರಿಂದ ವಿದ್ಯುತ್ ತಂತಿಯಿಂದ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ. ಇದನ್ನು ಯಾರೋ ಕಿತ್ತುಹಾಕಿದ್ದರು. ಈ ವಿಚಾರವಾಗಿ ನಡೆದ ಗಲಭೆ ಕೊಲೆಯಲ್ಲಿ ಅಂತ್ಯಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com