ನದಿ ತಿರುವು: ಸರ್ಕಾರ ನಿಲುವು ವಿರೋಧಿಸಿ ಪ್ರತಿಭಟನೆ 15ರಂದು

Updated on

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ದ.ಕ.ಜಿಲ್ಲೆಯ ಜನತೆ ವಿರೋಧಿಸುತ್ತಿಲ್ಲ ಎಂದು ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಈಗಲೂ ಜಿಲ್ಲೆಯ ಜನತೆ ಯೋಜನೆಗೆ ವಿರೋಧವಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ವಿರೋಧಿಸಿ ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ 'ನೇತ್ರಾವತಿ ತಿರುವು-ಸ್ವಾತಂತ್ರ್ಯದ ಕಳವು' ಹೆಸರಿನಲ್ಲಿ ಪ್ರತಿಭಟನೆ ನಡೆಸಲಿದೆ.  ಆ.15ರಂದು ಸ್ವಾಂತ್ರ್ಯದ ದಿನವಾದರೂ ಜಿಲ್ಲೆಯ ಜನರ ಸ್ವಾತಂತ್ರ್ಯವನ್ನು ನೇತ್ರಾವತಿ ನದಿ ತಿರುವನ್ನು ಬೆಂಬಲಿಸುವ ಅಥವಾ ತಟಸ್ಥರಾಗುವ ಮೂಲಕ ಜಿಲ್ಲೆಯ ರಾಜಕಾರಣಿಗಳು ಕಸಿದುಕೊಂಡಿದ್ದಾರೆ. ಈ ಯೋಜನೆ ಕೈಬಿಟ್ಟಲ್ಲಿ ಮಾತ್ರ ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ಲಭ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕ ದಿನೇಶ್ ಹೊಳ್ಳ  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿಗಳ ಮೌನ: ಜಿಲ್ಲೆಯ ಶಾಸಕರು, ಸಚಿವರು, ಸಂಸದರು, ಮಠಾಧಿಪತಿಗಳು ಹೀಗೆ ಎಲ್ಲರೂ ನದಿ ತಿರುವು ಯೋಜನೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಜನತೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.  ಕೇಂದ್ರ ನೇತ್ರಾವತಿ-ಹೇಮಾವತಿ ನದಿ ಜೋಡಣೆ ಪ್ರಸ್ತಾಪ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತ್ರಾವತಿ-ಪಾಲಾರ್ ಜೋಡಣೆ ಬಗ್ಗೆ ಮಾತನಾಡಿದ್ದಾರೆ. ಯೋಜನೆ ಬಗ್ಗೆ ಜನಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕು. ನೇತ್ರಾವತಿ ಉಳಿವಿಗೆ ಜಿಲ್ಲಾದ್ಯಂತ ದೊಡ್ಡ ಹೋರಾಟ ನಡೆಸುವುದಾಗಿ ಹೇಳಿದರು.
ಸದಸ್ಯರಾದ ಕಟೀಲು ದಿನೇಶ್ ಪೈ, ರಾಜೇಶ್ ದೇವಾಡಿಗ, ದಿನೇಶ್ ಕೊಡಿಯಾಲಬೈಲ್, ಸಪ್ನ ನರ್ಹೋನಾ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com