ಬಾಯಿ ತಪ್ಪಿ ಜಿನ್ನಾ ಹೆಸರು ಹೇಳಿದ್ದೆ: ಶತ್ರಘ್ನ ಸ್ಪಷ್ಟನೆ

ಮೊಹಮ್ಮದ್ ಆಲಿ ಜಿನ್ನಾರಿಂದ ಹಿಡಿದು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಜವಹರಲಾಲ್ ...
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
ಇಂಧೋರ್: ಮೊಹಮ್ಮದ್ ಆಲಿ ಜಿನ್ನಾರಿಂದ ಹಿಡಿದು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಜವಹರಲಾಲ್ ನೆಹರೂವರೆಗೆ ಭಾರತದ ಸ್ವಾತಂತ್ರ್ಯದಲ್ಲಿ ಬಹಳ ಮುಖ್ಯ ಪಾತ್ರವಹಿಸಿದವರು.ಕಾಂಗ್ರೆಸ್ ಪರಿವಾರ ದೇಶದ ಸ್ವಾತಂತ್ರ್ಯದಲ್ಲಿ ಅಳಿಸಲಾಗದ ಕೊಡುಗೆ ನೀಡಿದೆ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ ಶ್ಲಾಘಿಸಿದ್ದಾರೆ.
ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಕುಲ್ ನಾಥ್ ಬಿಜಿಪಿಯ ನಾಥನ್ ಶಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಗೆ ಇದೇ ಮೊದಲ ಮತ್ತು ಕೊನೆಯ ಬಾರಿ ಸೇರುತ್ತಿದ್ದು ಇನ್ನು ಈ ಪಕ್ಷದಿಂದ ಬಿಟ್ಟುಹೋಗುವುದಿಲ್ಲ ಎಂದರು.
ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಾದ ನ್ಯಾಯ್ ಬಗ್ಗೆ ದೇಶದ ಜನರು ಕುತೂಹಲಗೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿನ್ಹಾ ಹೇಳಿದರು.
ಬಾಯಿ ತಪ್ಪಿ ಜಿನ್ನಾ ಹೆಸರು ಹೇಳಿದ್ದೆ: ಶತ್ರಘ್ನ ಸ್ಪಷ್ಟನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com