ಶಬರಿಮಲೆ ಹಿಂಸಾಚಾರ: ಕೇರಳ ಬಿಜೆಪಿ ಅಭ್ಯರ್ಥಿಗೆ 14 ದಿನ ನ್ಯಾಯಾಂಗ ಬಂಧನ

ಕಳೆದ ವರ್ಷ ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ವಿಚಾರದಲ್ಲಿ ಉಂಟಾದ ಗಲಭೆ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕೇರಳ ನ್ಯಾಯಾಲಯವು ಬಿಜೆಪಿ ಲೋಕಸಭೆ ಚುನಾವಣಾ ಅಭ್ಯರ್ಥಿ....
ಕೆಪಿ ಪ್ರಕಾಶ್ ಬಾಬು
ಕೆಪಿ ಪ್ರಕಾಶ್ ಬಾಬು
Updated on
ತಿರುವನಂತಪುರಂ: ಕಳೆದ ವರ್ಷ ಶಬರಿಮಲೆ ದೇವಾಲಯಕ್ಕೆ ಮಹಿಳೆ ಪ್ರವೇಶ ವಿಚಾರದಲ್ಲಿ ಉಂಟಾದ ಗಲಭೆ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕೇರಳ ನ್ಯಾಯಾಲಯವು ಬಿಜೆಪಿ ಲೋಕಸಭೆ ಚುನಾವಣಾ ಅಭ್ಯರ್ಥಿಯೊಬ್ಬರಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಕೋಳಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆಪಿ ಪ್ರಕಾಶ್ ಬಾಬು ಅವರಿಗೆ ಕೇರಳ ಪಟ್ಟಣಂತಿಟ್ಟ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ.
ಕೇರಳ ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷರಾಗಿರುವ ಬಾಬು ಅವರ ಜಾಮೀಊನು ಅರ್ಜಿ ತಿರಸ್ಕೃತಗೊಂಡಿದ್ದು ಅವರನ್ನು ಕೊಟ್ಟಾರಕ್ಕರ ಉಪ ಜೈಲಿಗೆ ಕಳುಹಿಸಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಶಬರಿಮಲೆಗೆ ಮಹಿಳೆ ಪ್ರವೇಶ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ತಿರ್ಪಿನ ನಂತರ ನಡೆದ ಗಲಭೆಯಲ್ಲಿ ಆರೋಪಿ ಬಿಜೆಪಿ ಅಭ್ಯರ್ಥಿ ಬಾಬು ಮದ್ಯಮ ವಯಸ್ಕ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಮುನ್ನ ಬಾಬು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿತ್ತು.
ಶಬರಿಮಲೆ ಹಿಂಸಾಚಾರಕ್ಕೆ ಸಂಬಂಧಿಸಿ ಇನ್ನೂ ಏಳು ಪ್ರಕರಣಗಳು ಬಾಬು ಅವರ ಮೇಲಿದೆ.ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೋಲೀಸರು ಅವರ ಜಾಮೀನು ಅರ್ಜಿ ತ್ತಿರಸ್ಕೃತಗೊಂಡ ಬಳಿಕ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ. 
ಲೋಕಾಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಕೇರಳ ಬಿಜೆಪಿ ಅಭ್ಯರ್ಥಿ ಜೈಲುಪಾಲಾಗಿರುವುದು್ಬಿಜೆಪಿ ಪಾಳಯಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಸಮೀಪಿಸಿದ್ದು ಏಪ್ರಿಲ್ 4 ಕಡೆಯ ದಿನವಾಗಿದೆ. ಬಾಬು ಅವರು ಇಂದು ಜಾಮೀನು ಪಡೆದುಕೊಂಡ ಬಳಿಕ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದರೆಂದು ಮಾದ್ಯಮಗಳು ವರದಿ ಮಾಡಿದೆ.
ಇದೇ ವೇಳೆ ಬಾಬು "ನಂಬಿಕೆಯನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರ ಉಳಿಯಲ್ಲ, ಜೈಲುವಾಸಕ್ಕೆ ನಾನು ಹೆದರಲ್ಲ, ನಾನು ಜೈಲಿನಿಂದಲೇ ಚುನಾವಣೆ ಎದುರಿಸುವೆ" ನ್ಯೂಸ್ 18 ಮಲೆಯಾಳಂ ಸುದ್ದಿವಾಹಿನಿಗೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com