ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ಮಹಾಘಟಬಂಧನ್ ಸರ್ಕಾರವು "ಖಿಚಡಿ" ಸರ್ಕಾರವಾಗಲಿದೆ, ದೇಶಕ್ಕೆ ಈ ಖಿಚಡಿ ಸರ್ಕಾರ ಬೇಡ ಎಂಬ ಮಾತಿಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಕೈ ಅಭ್ಯರ್ಥಿ ಶಶಿ ತರೂರ್ ಪ್ರತಿದಾಳಿ ನಡೆಸಿದ್ದಾರೆ. "ಮೋದಿಜೀ, ನೀವೇನಾದರೂ ಅನಾರೋಗ್ಯಕ್ಕೆ ತುತ್ತಾದರೆ ಆಗ ನಿಮಗೆ ಖಿಚಡಿಯೇ ಬೇಕಾಗುತ್ತದೆ, ಹಾಗಾಗಿ ಮಹಾಘಟಬಂಧನ್ ಬಗೆಗೆ ಬಿಜೆಪಿ ಬೆಂಬಲಿಗರು ಮಾತನಾಡುವಾಗ ಒಮ್ಮೆ ಯೋಚಿಸಿರಿ" ಎಂದಿದ್ದಾರೆ.