ನಿನ್ನೆಯಷ್ಟೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಮಿತ್ರ ಪಕ್ಷಗಳ ಬೆಂಬಲವಿಲ್ಲದೆ ಈ ಬಾರಿ ಸರ್ಕಾರ ರಚನೆ ಮಾಡುವುದು ಕಷ್ಟ ಎಂದು ಹೇಳಿದ್ದರು. ಈ ಕುರಿತು ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ರಾಮ್ ಮಾಧವ್ ಅವರ ಅಭಿಪ್ರಾಯ ಸರಿ ಇದೆ. ಬಿಜೆಪಿ ಸರಳ ಬಹುಮತ ಸಿಗುವುದು ಸಾಧ್ಯತೆ ಕಡಿಮೆ. ಸರ್ಕಾರ ರಚನೆ ಮಾಡಲು ಬಿಜೆಪಿ ಇತರೆ ಪಕ್ಷಗಳನ್ನು ಅವಲಂಭಿಸಬೇಕು ಎಂದಿದ್ದಾರೆ.