ಮೋದಿಗೆ ಟಾಂಗ್; ಮೋಡ ಇಲ್ಲ, ನನ್ನ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ

ಪ್ರಧಾನಿ ನರೇಂದ್ರ ಮೋದಿ ಅವರ ಮೋಡದ ಮರೆಯಲ್ಲಿ ಬಾಲಾಕೋಟ್ ದಾಳಿ ಹೇಳಿಕೆಗೆ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಟಾಂಗ್ ಕೊಟ್ಟಿದ್ದಾರೆ.
ನರೇಂದ್ರ ಮೋದಿ-ಊರ್ಮಿಳಾ ಮಾತೋಂಡ್ಕರ್
ನರೇಂದ್ರ ಮೋದಿ-ಊರ್ಮಿಳಾ ಮಾತೋಂಡ್ಕರ್
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮೋಡದ ಮರೆಯಲ್ಲಿ ಬಾಲಾಕೋಟ್ ದಾಳಿ ಹೇಳಿಕೆಗೆ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಟಾಂಗ್ ಕೊಟ್ಟಿದ್ದಾರೆ.
ತಿಳಿನೀಲಿ ಆಕಾಶ, ಮೋಡಗಳು ಇಲ್ಲ, ಹೀಗಾಗಿ ನನ್ನ ನಾಯಿಮರಿ ರೋಮಿಯೋ ರೇಡಾರ್ ಸಿಗ್ನಲ್ ಅನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು ಎಂದು ಊರ್ಮಿಳಾ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನದ ಬಾಲಾಕೋಟ್ ವಾಯುದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇತ್ತು. ಹೀಗಾಗಿ ನಮ್ಮ ವಿಮಾನಗಳನ್ನು ಪತ್ತೆ ಮಾಡಲು ಪಾಕಿಸ್ತಾನದ ರೇಡಾರ್ ಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com