ಮೇ 23ರ ನಂತರ ಸುಮಲತಾ ಮಂಡ್ಯದಿಂದ ಕಾಲ್ಕೀಳುತ್ತಾರೆ: ಎಚ್.ಡಿ ರೇವಣ್ಣ

ಲೋಕಪಯೋಗಿ ಸಚಿವ ಎಚ್,ಡಿ ರೇವಣ್ಣ ಮತ್ತೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ....
ಎಚ್.ಡಿ ರೇವಣ್ಣ
ಎಚ್.ಡಿ ರೇವಣ್ಣ
ಮಂಡ್ಯ: ಲೋಕಪಯೋಗಿ ಸಚಿವ ಎಚ್,ಡಿ ರೇವಣ್ಣ ಮತ್ತೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಕೆ,ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎಚ್.ಡಿ ರೇವಣ್ಣ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಮೇ 23ರ ನಂತರ ಸುಮಲತಾ ಮಂಡ್ಯದಿಂದ ಕಾಲ್ಕೀಳುತ್ತಾರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯಗೆ ಏನು ಮಾಡಿದ್ದಾರೆ. ಅಂಬರೀಷ್ ಬದುಕಿದ್ದಾಗ ಸುಮಲತಾ ಒಮ್ಮೆಯಾದರೂ ಮಂಡ್ಯಕ್ಕೆ ಬಂದಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ ರೇವಣ್ಣ, ಕುಮಾರಸ್ವಾಮಿ ಮತ್ತು ದೇವೇಗೌಡರು, ಪುಟ್ಟರಾಜು, ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ, ಹೀಗಾಗಿ ಯೋಚಿಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com