ಕಾಂಗ್ರೆಸ್ ನ ಕರ್ಜ್ ಮುಕ್ತಿ(ಸಾಲದಿಂದ ಮುಕ್ತಿ) ಧ್ಯೇಯವನ್ನು ಟೀಕಿಸಿದ ಬಿಎಸ್ ವೈ, 70 ವರ್ಷಗಳು ಕಳೆದ ನಂತರ ಕಾಂಗ್ರೆಸ್ ಗೆ ರೈತರ ಪ್ರಾಮುಖ್ಯತೆ ಗೊತ್ತಾಗಿದೆ. ರೈತರಿಗೆ ಪ್ರತಿವರ್ಷ 6 ಸಾವಿರ ರೂಪಾಯಿ ನೀಡುವುದಾಗಿ ಪ್ರಧಾನಿ ಮೋದಿಯವರು ಭರವಸೆ ನೀಡಿದ ನಂತರ ರೈತರ ಮತಗಳು ಕೈಜಾರಿ ಹೋಗಬಹುದು ಎಂಬ ಭಯದಿಂದ ಕಾಂಗ್ರೆಸ್ ರೈತರನ್ನು ಓಲೈಸಲು ಹೊರಟಿದೆ. ಕಾಂಗ್ರೆಸ್ ನ ಕರ್ಜ್ ಮುಕ್ತಿ ಅಲ್ಲ, ಅದು ಕರ್ಜ್ ಮಾಫಿ ಅದು, ಕರ್ನಾಟಕದಲ್ಲಿ ಇನ್ನೂ ಕೂಡ ರೈತರ ಸಾಲ ಮನ್ನಾ ಯಾಕಾಗಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಉತ್ತರಿಸಬೇಕೆಂದರು.