ಇಂದು ಕೆಆರ್ ನಗರದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದ ದರ್ಶನ್ ಅವರಿಗೆ ಡೈಲಾಗ್ ಹೇಳಿ ಎಂದು ಕೆಲ ಅಭಿಮಾನಿಗಳು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ದರ್ಶನ್, ನೀನು ಡೈಲಾಗ್ ಅಂತಿಯಾ, ಎದುರಿಗೆ ಮಿಡಿಯಾ ಬೇರೆ ಇದೆ. ಅದು ಬೇರೆನೆ ಆಗುತ್ತೆ. ಸರಿ ನೀನು ಸುಮಲತಾಗೆ ಓಟು ಹಾಕ್ತಿನಿ ಅಂದ್ರೆ ನಾನು ಡೈಲಾಗ್ ಹೇಳ್ತಿನಿ ಎಂದರು. ಅಲ್ಲದೆ ಹೇ ಕ್ಯಾಡ್ಬರಿಸ್ ಆನೆ ನಡೆದಿದ್ದೆ ದಾರಿ.... ಬರ್ತಾ ಇದ್ದೀನಿ... ಎಂದು ಡೈಲಾಗ್ ಹೊಡೆದೇ ಬಿಟ್ಟರು...