ಪ್ರತೀ ತಿಂಗಳಿಗೆ 6 ಸಾವಿರ ರೂ. ನಂತೆ 5 ವರ್ಷದಲ್ಲಿ 3.60 ಲಕ್ಷ ರೂ. ಗಳನ್ನು ಬಡವರ ಖಾತೆಗೆ ಹಾಕಬಹುದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ' ನ್ಯಾಯ್' ಯೋಜನೆ ಮೂಲಕ ಬಡವರ ಖಾತೆಗೆ ಹಣ ಹಾಕುವ ಭರವಸೆಯನ್ನು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಹಣ ಎಲ್ಲಿಂದ ತರುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ. ಜನರ ಖಾತೆಗೆ ಮೋದಿ ಸ್ನೇಹಿತ ಅನಿಲ್ ಅಂಬಾನಿ ಅವರಿಂದಲೇ ಹಣ ಬರುವಂತೆ ಮಾಡಲಾಗುವುದು. ನೂರಕ್ಕೆ ನೂರು ಪ್ರತಿಶತ ಕಾವಲುಗಾರ ಕಳ್ಳ (ಚೌಕಿದಾರ್ ಚೋರ್). ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಅಂಬಾನಿ, ಮೋದಿ ಸೇರಿದಂತೆ ಇವರದ್ದೆಲ್ಲ ದೊಡ್ಡ ಕಳ್ಳರ ಗುಂಪು. ಇವರೆಲ್ಲ ಕಳ್ಳರ ಗುಂಪಿನ ಸದಸ್ಯರು. ದೇಶದ ಕಾರ್ಮಿಕರು, ಬಡವರು, ಕೃಷಿಕರ ಹಣವನ್ನು ಕದ್ದು ತಮ್ಮ ಕಳ್ಳರ ಗಂಪಿನ ಸದಸ್ಯರಿಗೆ ಮೋದಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.