"ನಾನು ಈ ಮೊದಲೂ ಇದನ್ನೇ ಹೇಳಿದ್ದೆ, ನನಗೆ ಎಂದಿಗೂ ದೇಶವೇ ಮೊದಲು. ನಾನು ಗುರುವಾರದಿಂದ ನೆಲಮಟ್ಟದೈಂದ ಜನರನ್ನು ಭೇಟಿಯಾಗುತ್ತಿದ್ದೇನೆ. ಆದರೆ ಶುಕ್ರವಾರ ವಿವಿಧ ಸ್ಥಳಗಳಲ್ಲಿ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ" ತೇಜಸ್ವಿನಿ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಜನಪ್ರಿಯ ನಾಯಕಿಯಾಗಿ ಸಾಮಾಜಿಕ ಕೆಲಸ ಕಾರ್ಯ, ಪರಿಸರ ಕಾಳಜಿ, ಅಪೌಷ್ಟಿಕತೆ ಮತ್ತು ಝೀರೋ ಗಾರ್ಬೇಜ್ ಸಮಸ್ಯೆಗಳನ್ನು ಬಹಳ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಬಿಜೆಪಿ ಉಪಾಧ್ಯಕ್ಷೆಯೂ ಆಗಿರುವ ತೇಜಸ್ವಿನಿಯವರ ಮೇಲೆ ಇನ್ನಷ್ಟು ಜವಾಬ್ದಾರಿಗಳು ಇದೆ.