ಹಿಂದುಳಿದ ವರ್ಗಗಳ ಮುಖಂಡ ಕೆಎನ್ ರಾಜಣ್ಣ, ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯವಾಗಿ ಸಿದ್ದರಾಮಯ್ಯನವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದು ಸೇರಿದಂತೆ ಹಲವು ಬಾರಿ ತುಳಿದಿದ್ದರಿಂದ ನಾವು ಈ ಬಾರಿ ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಬೇಕೆಂದು ನಿರ್ಣಯ ಕೈಗೊಂಡಿದ್ದೇವೆ. ನಮ್ಮ ಸಮುದಾಯದವರನ್ನು ಓಲೈಸುವ ಸಲುವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯ ಶಂಕರ್ ಅವರನ್ನು ಗೆಲ್ಲಿಸಬೇಕೆಂದು ಬೆಂಬಲ ಸೂಚಿಸಿದ್ದಾರೆ. ವಿಜಯ್ ಶಂಕರ್ ಅವರು ಕುರುಬ ನಾಯಕರಾಗಿದ್ದು ಸಿದ್ದರಾಮಯ್ಯನವರ ಬೆಂಬಲಿತ ಅಭ್ಯರ್ಥಿ. ಆದರೆ ವಾಸ್ತವವಾಗಿ ದೇವೇಗೌಡರಿಗೆ ಕುರುಬ ಜನಾಂಗದ ಮೇಲೆ ಪ್ರೀತಿ, ಅಭಿಮಾನ ಇಲ್ಲ ಎಂದು ಆರೋಪಿಸಿದರು.