ಮತಗಟ್ಟೆ ಅಧಿಕಾರಿಗೆ ಸಚಿವ ಪುಟ್ಟರಾಜು ತರಾಟೆ, ಸುಮಲತಾಗೆ ಮತ ಹಾಕಲು ಪರದಾಡಿದ ಮತದಾರರು

ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಮತದಾನ ...
ಮತಗಟ್ಟೆಯಲ್ಲಿ ಸಚಿವ ಪುಟ್ಟರಾಜು ಚುನಾವಣಾ ಸಿಬ್ಬಂದಿ ಜೊತೆ ಮಾತನಾಡುತ್ತಿರುವುದು
ಮತಗಟ್ಟೆಯಲ್ಲಿ ಸಚಿವ ಪುಟ್ಟರಾಜು ಚುನಾವಣಾ ಸಿಬ್ಬಂದಿ ಜೊತೆ ಮಾತನಾಡುತ್ತಿರುವುದು
Updated on
ಮಂಡ್ಯ: ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಮಂಡ್ಯದ ನಾಗಮಂಗಲ ತಾಲೂಕಿನ ಅರಗಿನಮೇಳೆ ಗ್ರಾಮದ ಬೂತ್​ ಸಂಖ್ಯೆ 202ರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಹಾಕಲು ಮತದಾರರು ಪರದಾಡಿದ ಘಟನೆ ನಡೆದಿದೆ.
ಸುಮಲತಾ ಅಂಬರೀಷ್ ಹೆಸರಿನ ಮುಂದಿನ ಬಟನ್​ ಎಷ್ಟು ಬಾರಿ ಒತ್ತಿದರೂ ಕೂಡ ಹೆಸರು ಬರುತ್ತಿಲ್ಲ, ಮೂರ್ನಾಲ್ಕು ಬಾರಿ ಒತ್ತಿದ ಮೇಲಷ್ಟೇ ಸುಮಲತಾ ಅವರಿಗೆ ಮತ ಬೀಳುತ್ತಿದೆ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಮತ್ತು ಸುಮಲತಾ ಪರ ಬೆಂಬಲಿಗರು, ದೋಷಪೂರಿತ ಮತಯಂತ್ರ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com