ಚಾಮರಾಜನಗರ: ಹ್ಯಾಟ್ರಿಕ್ ಗೆಲುವಿನ ಮೇಲೆ ಧ್ರುವನಾರಾಯಣ ಕಣ್ಣು, ಕಾಂಗ್ರೆಸ್ ಗೆ ಪ್ರಸಾದ್ ಬಿಸಿ ತುಪ್ಪ

ಸಂಸದ ಧ್ರೃವನಾರಾಯಣ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಕೊನೆ ಗಳಿಗೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
ಧ್ರುವನಾರಾಯಣ, ಶ್ರೀನಿವಾಸ್ ಪ್ರಸಾದ್
ಧ್ರುವನಾರಾಯಣ, ಶ್ರೀನಿವಾಸ್ ಪ್ರಸಾದ್
Updated on
ಬೆಂಗಳೂರು:  ನಂಜುಂಡಪ್ಪ ಸಮಿತಿ ವರದಿ ಅನುಸಾರ ಹೆಚ್ಚಿನ  ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜ ನಗರ ಜಿಲ್ಲೆ ಬದಲಾವಣೆಯ ಗಾಳಿ ಬೀಸುತ್ತಿದೆ.ಈ ಹಿಂದುಳಿದ ಪ್ರಾಂತ್ಯದಲ್ಲಿನ ಕಾಡುಗಳಲ್ಲಿ  ಎರಡು ದಶಕಗಳಿಗೂ ಹೆಚ್ಚು ಕಾಲ ಕಾಡುಗಳ್ಳ ವೀರಪ್ಪನ್ ಮೆರೆದಿದ್ದ. ಆದರೆ, ಆತನ ಸಾವಿನ ಬಳಿಕ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಂಡುಬರುತ್ತಿದೆ.
ಈ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿರುವುದಕ್ಕೆ ಅನೇಕ ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಸ್ಪಿ ಕಾಂಗ್ರೆಸ್ ಮತಗಳನ್ನು ತೆಗೆದುಕೊಳ್ಳಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. 
ಬಿಎಸ್ಪಿಯಿಂದ ಶಿವಕುಮಾರ್  ಸ್ಪರ್ಧಿಸಿದ್ದಾರೆ. ಪ್ರಸಾದ್ ಜನರ ಬಳಿಗೆ ಹೇಗೆ ತಲುಪುತ್ತಾರೆ ಎಂಬುದು ಪ್ರಮುಖವಾದ ವಿಚಾರವಾಗಿದೆ. ಮೋದಿ ಕಾರ್ಡ್,  ದಲಿತ ಮತಗಳ ವಿಭಜನೆ ಹಾಗೂ ಉಪ್ಪಾರ ಸಮುದಾಯದ ಮತಗಳಿಗೆ ಅವರಿಗೆ ನೆರವು ನೀಡಬಹುದು ಎಂದು ರಾಮಪುರದ ಗೋವಿಂದ್ ಎಂಬುವರು ಹೇಳುತ್ತಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com