ಪಕ್ಷ ಸಂಘಟನೆಗೆ ನೀಡಿರುವ ಧನ ಸಹಾಯವನ್ನೂ ಪಕ್ಷದ ಅಧ್ಯಕ್ಷರು ಮತ್ತು ನಾಯಕರು ದುರುಪಯೋಗ ಪಡಿಸಿಕೊಂಡಿದ್ದಾರೆ. 2015 ರಿಂದ 2017ರ ಅವಧಿಯಲ್ಲಿ ಒಟ್ಟು 24 ಲಕ್ಷ ರೂ.ನೀಡಲಾಗಿತ್ತು. ಆ ಪೈಕಿ 5 ಲಕ್ಷ ರೂ.ಮಾತ್ರ ಮರು ಪಾವತಿಸಿರುವ ಕೆಪಿಸಿಸಿ ಇನ್ನುಳಿದ ದೇಣಿಗೆ ಹಣ ಬಳಕೆ ಕುರಿತು ಮಾಹಿತಿ ನೀಡಿಲ್ಲ. ಆದ್ದರಿಂದ, ಈ ಎಲ್ಲ ನ್ಯೂನತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮುಂಚೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದಿನೇಶ ಗುಂಡೂರಾವ್ ಅವರು ನೀಡುವ ಬಿ ಫಾರ್ಮ್ ವಿತರಣೆಗೂ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು.