'ಇದು ವರ್ಷದ ಅತಿದೊಡ್ಡ ಜೋಕ್'' ; ಡೈರಿ ಪ್ರಕರಣಕ್ಕೆ ಬಿ ವೈ ರಾಘವೇಂದ್ರ ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಬರೆದಿದ್ದ ಡೈರಿ ಕಾಂಗ್ರೆಸ್ ನಾಯಕ...
ಬಿ ವೈ ರಾಘವೇಂದ್ರ
ಬಿ ವೈ ರಾಘವೇಂದ್ರ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಬರೆದಿದ್ದ ಡೈರಿ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಮನೆಯಲ್ಲಿ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿತ್ತು ಎನ್ನಲಾದ ಪ್ರಕರಣವಿಡೀ ವರ್ಷದ ಒಂದು ದೊಡ್ಡ ಜೋಕ್ ನ ವಿಷಯವಾಗಿ ಕಾಣುತ್ತದೆ ಎಂದು ಶಿವಮೊಗ್ಗ ಸಂಸದ, ಯಡಿಯೂರಪ್ಪನವರ ಪುತ್ರ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೆಯದಾಗಿ ನಮ್ಮ ತಂದೆಗೆ ಡೈರಿ ಬರೆಯುವ ಅಭ್ಯಾಸವಿಲ್ಲ. ಎರಡನೆಯದ್ದು ಡೈರಿಯ ಎಲ್ಲಾ ಪುಟಗಳಲ್ಲಿ ಸಹಿ ಮಾಡಿರುತ್ತಾರೆಯೇ? ಡೈರಿ ಸೃಷ್ಟಿ ಮಾಡಿದವರಿಗೆ ಮೂಲ ಸಾಮಾನ್ಯ ಜ್ಞಾನವಿರಬೇಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com