ಚಿತ್ರನಟರ ವಿರುದ್ಧ ತಮ್ಮ ಟೀಕಾಪ್ರಹಾರ ಮುಂದುವರೆಸಿರುವ ಕುಮಾರಸ್ವಾಮಿ ಇಂದು ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ನನ್ನ ಮಗನಿಗೂ ಕೂಡ ಯುವರಾಜ ಎಂದು ಬಿರುದು ಕೊಟ್ಟಿದ್ದಾರೆ. ಅವನು ಈಗ ಯುವರಾಜನಾ? ಅವನಿಗೆ ಯಾರೋ ನಾಲ್ಕು ಜನ ಅಭಿಮಾನಿಗಳು ಬಿರುದುಕೊಟ್ಟಿದ್ದಾರೆ. ಹಾಗೆಂದು ನಾವು ದೊಡ್ಡದಾಗಿ ಮೆರೆಯಲು ಆಗುತ್ತದೆಯೇ" ಎಂದು ದರ್ಶನ್ ಗೆ ಪ್ರಶ್ನಿಸಿದ್ದಾರೆ.