ನಾಲ್ಕು ಜನ ಬಿರುದು ಕೊಟ್ಟರಾಯಿತೇ?: ತಮಗೆ ಡಿ ಬಾಸ್, ಛಾಲೆಂಜಿಂಗ್ ಸ್ಟಾರ್ ಎಂದು ಜನರು ಕೊಟ್ಟ ಬಿರುದು, ಭಿಕ್ಷೆ, ಅದು ಸಿಎಂ ಕುಮಾರಸ್ವಾಮಿ ಕೊಟ್ಟದ್ದಲ್ಲ ಎಂದು ನಟ ದರ್ಶನ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ದೇಶದ ಆರೂವರೆ ಕೋಟಿ ಜನ ಡಿ ಬಾಸ್ ಎಂದು ಬಿರುದು ಕೊಟ್ಟಿದ್ದಾರೆಯೇ? ಯಾರೋ ನಾಲ್ಕು ಜನ ಅಭಿಮಾನಿಗಳು ಕೊಡುತ್ತಾರೆ. ಹಾಗಂತ ಈ ನಾಡಿನ ಜನತೆಗೆ ಬಾಸ್ ಆಗಲು ಸಾಧ್ಯವೇ, ನನ್ನ ಮಗನನ್ನು ಯಾರೋ ನಾಲ್ಕು ಜನ ಯುವರಾಜ ಎಂದು ಕರೆದ ತಕ್ಷಣ ಆತ ಯುವರಾಜನಾಗುತ್ತಾನೆಯೇ ಎಂದು ಪ್ರಶ್ನಿಸಿದರು.