ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ನಾಯಕರು ಏನೇನು ಮಾಡುತ್ತಿದ್ದರು ಎಂದು ಈ ರಾಜ್ಯದ ಜನತೆ ನೋಡಿದ್ದಾರೆ. ಸಿಎಂ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದರು. ಈಗ ಪರಿಸ್ಥಿತಿಯ ಲಾಭ ಪಡೆಯಲು ನಾವು ನಿಜವಾದ ಜೋಡೆತ್ತುಗಳು ಅನ್ನುತ್ತಿದ್ದಾರೆ. ನನ್ನ ಬೆಂಬಲಕ್ಕೆ ನಿಂತಿರುವ ಮಕ್ಕಳ ಸಮಾನರಾದ ಯಶ್, ದರ್ಶನ್ ಅವರಿಗೆ ತಾವು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂಬ ಅರಿವಿದೆ. ಯಾರು ಎಷ್ಟೇ ಬೆದರಿಕೆ ಹಾಕಿದರೂ ಕೂಡ ಅವರು ನನ್ನೊಂದಿಗಿರುತ್ತಾರೆ. ನಾನು ಹೋದ ಕಡೆ ಪ್ರಚಾರ ಸಭೆಗಳಲ್ಲಿ ಜನರನ್ನು ದುಡ್ಡು ಕೊಟ್ಟು ಕರೆಸಿಕೊಂಡಿಲ್ಲ, ಜನರೇ ಪ್ರೀತಿಯಿಂದ, ಅಂಬರೀಷ್ ಮೇಲಿನ ಅಭಿಮಾನದಿಂದ ಬರುತ್ತಾರೆ. ನನ್ನ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.