ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು ಸದ್ಯ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಸಿ,ಪಿ ಯೋಗೇಶ್ವರ್ ಅವರಿಗೆ ಇಲ್ಲಿನ ಜನ ಕೃತಜ್ಞರಾಗಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರದಿಂದಾಗಿ ನೀರಿಗೆ ಹಾಹಾಕಾರ ಎದ್ದರೇ ರಾಮನಗರ ಜಿಲ್ಲೆಯಲ್ಲಿ ಮಾತ್ರ ನೀರಿಗೆ ಕೊರತೆಯೇ ಇಲ್ಲ, ಯೋಗೇಶ್ವರ್ ಕೈಗೊಂಡ ಉತ್ತಮ ಕೆಲಸದಿಂದಾಗಿ ಎಲ್ಲಾ ಹಳ್ಳಿಗಳ ಕೆರೆಗಳು ತುಂಬಿ ತುಳುಕುತ್ತಿವೆ, ಕಪ್ಪುಹಣವನ್ನು ಭಾರತದಿಂದ ಮೋದಿ ತೆರವುಗೊಳಿಸಿದರು, ನಂತರ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರು,. ಅದಕ್ಕಾಗಿ ಮೋದಿ ಮತ್ತೆ ಆರಿಸಿ ಬರಬೇಕು, ಅವರು ನಮ್ಮ ದೇಶವನ್ನು ರತ್ರಿಸುತ್ತಾರೆ, ನಮ್ಮ ನಾಯಕರು ಮೂಲಭೂತ ಸೌಕರ್ಯಗಳಾದ, ರಸ್ತೆ ಕುಡಿಯುವ ನೀರು, ಆಸ್ಪತ್ರೆ, ಶಾಲೆ,ಸೇರಿಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದು ವೆಂಕಟೇಶಪ್ಪ ಎಂಬ ರೈತ ಹೇಳಿದ್ದಾರೆ.