ಮಂಡ್ಯ: ಆತಗೂರು ಗ್ರಾಮದಲ್ಲಿ ಭತ್ತ ನಾಟಿ ಮಾಡಿದ ನಿಖಿಲ್ ಕುಮಾರ್

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯ ಬಳಿಕ ಇದೀಗ ಅವರ ಪುತ್ರ, ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಗದ್ದೆಗಿಳಿದು ನಾಟಿ ಮಾಡಿದ್ದಾರೆ....
ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ
ಭತ್ತ ನಾಟಿ ಮಾಡಿದ ನಿಖಿಲ್ ಕುಮಾರಸ್ವಾಮಿ
ಮಂಡ್ಯ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯ ಬಳಿಕ ಇದೀಗ ಅವರ ಪುತ್ರ, ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಗದ್ದೆಗಿಳಿದು ನಾಟಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಆತಗೂರಿನ ಗ್ರಾಮಸ್ಥರೊಬ್ಬರ ಗದ್ದೆಯಲ್ಲಿ ನಿಖಿಲ್ ಇಂದು ನಾಟಿ ಮಾಡಿದ್ದಾರೆ. ಈ ಹಿಂದೆ ಸಿಎಂ ಕುಮಾರಸ್ವಾಮಿ ಕೂಡಾ ಮಂಡ್ಯ ಗದ್ದೆಯಲ್ಲಿ ನಾಟಿ ಮಾಡಿದ್ದರು. ಈ ಮೂಲಕ ನಾವು ಕೂಡ ರೈತರ ಮಕ್ಕಳೆಂದು ರೈತರನ್ನು ಮತ್ತಷ್ಟು ಸೆಳೆಯುವ ಯತ್ನ ಎನ್ನಲಾಗುತ್ತಿದೆ.
ನಿಖಿಲ್ ಮದ್ದೂರು ಭಾಗದಲ್ಲಿ ಇಂದು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಪ್ರಚಾರ ಮಾಡುತ್ತಿದ್ದ ಪಕ್ಕದ ಗದ್ದೆಯಲ್ಲಿ ರೈತರು ಗದ್ದೆ ನಾಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ನಿಖಿಲ್ ತಾವೂ ಅವರೊಂದಿಗೆ ಸೇರಿ ನಾಟಿ ಮಾಡಿದ್ದಾರೆ. 
ನಾಟಿ ಮಾಡುವಾಗ ರೈತರ ಜೊತೆ ತಮಾಷೆಯಾಗಿ ಮಾತನಾಡಿದ್ದಾರೆ. ಅಲ್ಲದೆ ಅವರ ಜೊತೆ ಮಾತುಕತೆ ನಡೆಸಿ, ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com