ಸಿದ್ದರಾಮಯ್ಯ ಕಮಡೊಳ್ಳಿಯಲ್ಲಿ ಸಮಾವೇಶ, ಶಿರೂರಲ್ಲಿ ರೋಡ್ ಶೋ ಮುಗಿಸಿಕೊಂಡು ದೇವನೂರು ಗ್ರಾಮದಲ್ಲಿ ರೋಡ್ ಶೋ ನಡೆಸಲು ಬಂದಿದ್ದರು. ಈ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತಾದರೂ ಕೆಲ ಕಾರ್ಯಕ್ರಮಗಳನ್ನು ಮುಗಿಸಿ ಬರುವುದು ತಡವಾಗಿತ್ತು. ಆದರೆ, ಸಂಜೆ ಬಿಜೆಪಿಯ ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ರೋಡ್ ಶೋ ನಿಗದಿ ಆಗಿತ್ತು. ಹೀಗಾಗಿ ಎರಡೂ ಪಕ್ಷದ ನೂರಾರು ಕಾರ್ಯಕರ್ತರು ಏಕಕಾಲಕ್ಕೆ ಜಮಾಯಿಸಿದ್ದರಿಂದ ಈ ಬೆಳವಣಿಗೆ ನಡೆದಿದೆ.