ಎಲ್ಲೆಲ್ಲೂ ಕೇಸರಿ ಗರ್ಜನೆ, ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ- ನವರಸ ನಾಯಕ ಜಗ್ಗೇಶ್ ಟ್ವೀಟ್

ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್, ಬಿ.ಎಸ್. ಯಡಿಯೂರಪ್ಪ
ಜಗ್ಗೇಶ್, ಬಿ.ಎಸ್. ಯಡಿಯೂರಪ್ಪ
Updated on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮ್ಯಾಜಿಕ್ ನಂಬರ್ 272ನ್ನು ಮೀರಿ 350ರ ಗಡಿ ಸಮೀಪಿಸುತ್ತಿದ್ದು, ಜಯದ ನಾಗಲೋಟದತ್ತ ದಾಪುಗಾಲು ಹಾಕಿದೆ.  ಕೇಂದ್ರದಲ್ಲಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಈ ಬಾರಿ ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ. ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ  ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್  ಟ್ವೀಟ್ ಮಾಡಿದ್ದಾರೆ.

ಅದ್ಭುತ, ಅತ್ಯಧ್ಬುತ... ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ....ಸಂಭವಾಮಿ ಯುಗೇ ಯುಗೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com