ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟುಮಾಡಿತು. ಇದಕ್ಕಾಗಿ ಪಾರ್ವತಿ ಒಂದು ನಿರ್ಣಯಕ್ಕೆ ಬರುತ್ತಾಳೆ. ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿದಳು. ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ನೇಮಿಸಿದಳು. ನಂತರ ಯಥಾವತ್ತಾಗಿ ಅಪೇಕ್ಷಿತವೆಂಬಂತೆ ಕೈಲಾಸಪತಿಯ ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ. ಇದೇನು, ಈ ಹುಡುಗ, ಯವನೋ ಹೊಸಬ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ರುದ್ರ ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ.