ಅಂಗಲಾಸುರನು ಈ ರೀತಿ ಅನೇಕ ಅರಣ್ಯಗಳನ್ನು ಸುಟ್ಟು ಹಾಕಿದ್ದನು. ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಸುಟ್ಟು ಬೂದಿ ಮಾಡಿದ್ದನು. ಗಣಪತಿಯು ಅನೇಕ ರಾಕ್ಷಸರನ್ನು ಸಾಯಿಸಿದ್ದಾನೆಂದು ಅವನಿಗೆ ತಿಳಿದಿತ್ತು. ಅವನು ಸೇಡು ತೀರಿಸಿಕೊಳ್ಳಬೇಕೆಂದು ಕಾಯುತ್ತಿದ್ದನು. ಗಣಪತಿಯನ್ನು ಸಾಯಿಸಬೇಕೆಂದು ಅವನು ಹುಡುಕುತ್ತದ್ದನು, ಆದರೆ ಗಣಪತಿಯು ಅವನಿಗೆ ಸಿಗಲಿಲ್ಲ. ಒಂದು ದಿನ ಗಣಪತಿಯು ತನ್ನ ಚಿಕ್ಕರೂಪವನ್ನು ಬದಲಾಯಿಸಿ ಅಂಗಲಾಸುರನ ಮೂರುಪಟ್ಟು ದೊಡ್ಡವನಾದನು. ಅವನನ್ನು ನೋಡಿ ರಾಕ್ಷಸನು ಹೆದರಿದನು. ಆ ರಾಕ್ಷಸನ್ನು ಕೈಯಲ್ಲಿ ಎತ್ತಿ ಗಣಪತಿಯು ಅಡಕೆಯನ್ನು ತಿನ್ನುವಂತೆ ತಿಂದರು. ಇದರಿಂದಾಗಿ ಗಣಪತಿಯು ಬೆಂಕಿ ಬೆಂಕಿಯಾದರು. ಇದನ್ನು ಶಮನ ಮಾಡಲು ದೇವತೆಗಳು ಮತ್ತು ಋಷಿಮುನಿಗಳು ಅವನಿಗೆ ದೂರ್ವೆಯನ್ನು ಹಚ್ಚಿದರು. ದೂರ್ವೆಯಿಂದ ಬೆಂಕಿಯು ತಣ್ಣಗಾಯಿತು ಮತ್ತು ಗಣಪತಿಯು ಶಾಂತವಾಗಿದ್ದರು.