'ಡಾಕ್ಟ್ರೆ ಮಗುವಿಗೆ ಭೇದಿ ಶುರುವಾಗಿದೆ. ಬರೀ ನೀರೇ ಹೋಗ್ತಿದೆ. ಅದಕ್ಕೆ ಬೆಳಗ್ಗೆಯಿಂದ ನೀರೂ ಕೊಟ್ಟಿಲ್ಲ. ಭೇದಿ ಮಾತ್ರೆ ಕೊಟ್ಟಿದ್ದೇನೆ. ಆದರೂ ಕಮ್ಮಿಯಾಗ್ತಿಲ್ಲ'- ಎಂದು ಪೋಷಕರು ಗಾಬರಿಯಿಂದ ಆಸ್ಪತ್ರೆಗೆ ಮಗುವಿನೊಂದಿಗೆ ಬರೋದ್ ಕಾಮನ್.
ಭೇದಿಯಿಂದ ಸಾವಿಗೀಡಾಗುವ ಮಕ್ಕಳ ಸಂಖ್ಯೆ ಭಾರತದಂಥ ದೇಶದಲ್ಲಿ ಹೆಚ್ಚಾಗಿರುವುದರಿಂದ ಪೋಷಕರ ಈ ಭಯಕ್ಕೂ ಅರ್ಥವಿದೆ. ಆದರೆ, ಅಷ್ಟೇನೂ ಆತಂಕ ಬೇಡ. ಸೂಕ್ತ ಮಾಹಿತಿಯಿದ್ದರೆ ಬೇಗ ರೋಗವನ್ನು ನಿಯಂತ್ರಣಕ್ಕೆ ತರಬಹುದು. ನೀವಾಗಿಯೇ ಯಾವುದೋ ಮಾತ್ರೆ ತಿನ್ನಿಸಿ ಸ್ವಯಂ ವೈದ್ಯರಾಗಬೇಡಿ.
ಒಂದೆರಡು ಸಾರಿ ಭೇದಿ ಆದರೆ ಅದು ಅಜೀರ್ಣದಿಂದ ಆಗಿರುತ್ತದೆ. ಆಗ ಯಾವುದೇ ಔಷಧಿ ನೀಡುವ ಅಗತ್ಯವೇ ಇಲ್ಲ. ಬಹಳಷ್ಟು ಸಲ ಭೇದಿ ಆದರೆ ಅದಕ್ಕೆ ವೈರಸ್, ಬ್ಯಾಕ್ಟೀರಿಯಾ, ಪ್ಯಾರಸೈಟ್ ಸೋಂಕು ಕಾರಣವಾಗಿರುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ವೈರಸ್ನಿಂದ ಬರುವ ಭೇದಿ ಎರಡು ದಿನಗಳಿಂದ ಎರಡು ವಾರಗಳ ತನಕವೂ ಮುಂದುವರಿಯಬಹುದು. ನಂತರ ಚಿಕಿತ್ಸೆ ನೀಡದೆಯೂ ವಾಸಿಯಾಗುತ್ತದೆ. ವೈರಸ್ಗಳಿಂದ ಉಂಟಾಗುವ ಲೂಸ್ ಮೋಷನ್ಗೆ ಯಾವುದೇ ಆ್ಯಂಟಿ ಬಯೋಟಿಕ್ ನೀಡಿಯೂ ಪ್ರಯೋಜನವಿಲ್ಲ. ಕೆಲವೊಮ್ಮೆ ಹಸಿರು ಬಣ್ಣದ ಭೇದಿಯಾಗುತ್ತದೆ. ಇದಕ್ಕಂತೂ ಗಾಬರಿಯಾಗುವುದೇ ಬೇಡ. ಪಿತ್ತ ಎಂಬ ದ್ರವವು ಪಚನವಾಗದೇ ಈ ರೂಪದಲ್ಲಿ ಹೊರ ಹೋಗುತ್ತದೆ.
ಭೇದಿ ಆರಂಭವಾಯಿತು ಎನ್ನುವಷ್ಟರಲ್ಲಿ ಆಹಾರ ಪದ್ಧತಿಯನ್ನು ಬದಲಿಸಬೇಡಿ. ಹೆಚ್ಚೆಚ್ಚು ದ್ರವಾಹಾರ ನೀಡಿ. ಡೀಹೈಡ್ರೇಷನ್ ಅಂದರೆ ಮೂತ್ರ ವಿಸರ್ಜನೆ ಮಾಡದಿರುವುದು ಅಥವಾ ಸಾಂದ್ರವಾದ ಮೂತ್ರ, ಕಣ್ಣೀರು ಬತ್ತುವುದು ಆಗದಂತೆ ನೋಡಿಕೊಳ್ಳಿ.
ಆರೈಕೆಯ ಹಾದಿಗಳು...
Advertisement