ಹೆಚ್ಚಳ ಕಂಡ ಮಕ್ಕಳ ಡಯಾಬಿಟಿಸ್

ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಹರಡಲು, ೫೦೦ ಕ್ಕೂ ಹೆಚ್ಚಿನ ವೈದ್ಯರು ಒಟ್ಟಿಗೆ ಬಂದು "ನೀಲಿ ವೃತ್ತ"ವನ್ನು ರಚಿಸಿದರು. ನೀಲಿವೃತ್ತ ಡಯಾಬಿಟಿಸ್ ನ ಸಾರ್ವತ್ರಿಕ ಚಿಹ್ನೆ.

ಭಾರತದಲ್ಲಿ ಡಯಾಬಿಟಿಸ್ ಅಧ್ಯಯನದ ಸಂಶೋಧನಾ ಸಂಸ್ಥೆ (ಆರ್ ಎಸ್ ಎಸ್ ಡಿ ಐ) ಆಯೋಜಿಸಿದ್ದ ಬೆಂಗಳೂರಿನ ವಾರ್ಷಿಕ ಸಮಾವೇಶದಲ್ಲಿ ಈ ವೈದ್ಯರು ಭಾಗವಹಿಸಿದ್ದರು.

ರ್ಯಾನ್ ಬಾಕ್ಸಿ ಸಂಸ್ಥೆಯ ಭಾರತ ವಿಭಾಗದ ಮುಖ್ಯಸ್ಥ ರಾಜೀವ್ ಸಿಬಲ್, "ರೋಗದ ತಿಳುವಳಿಕೆಯ ಕೊರತೆಯಿಂದಾಗಿ ಮಕ್ಕಳ ಟೈಪ್ ೧ ಡಯಾಬಿಟಿಸ್ ಅನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚುವುದಿಲ್ಲ. ಭಾರತದಲ್ಲಿ ಸುಮಾರು ೭೦೦೦೦ ಮಕ್ಕಳಿಗೆ ಟೈಪ್ ೧ ಡಯಾಬಿಟಿಸ್ ಇದೆ. ನಾವು ನೀಲಿ ವೃತ್ತ ನಿರ್ಮಿಸಿದ ಉದ್ದೇಶವೆಂದರೆ ಸಮಾಜದಲ್ಲಿ ಹೆಚ್ಚುತ್ತಿರುವ ಡಯಾಬಿಟಿಸ್ ಅದರಲ್ಲೂ ಮಕ್ಕಳ ಡಯಾಬಿಟಿಸ್ ಬಗ್ಗೆ ತಿಳುವಳಿಕೆ ಮೂಡಿಸುವುದಕ್ಕೆ. ಡಯಾಬಿಟಿಸ್ ದೊಡ್ಡವರಿಗೆ ಮಾತ್ರ ಬರುತ್ತದೆ, ಮಕ್ಕಳಿಗಲ್ಲ ಎಂಬ ತಪ್ಪು ತಿಳುವಳಿಕೆ ಜನರ ಮಧ್ಯೆ ಇದೆ" ಎಂದಿದ್ದಾರೆ.

ಈ ಸಮಾವೇಶದಲ್ಲಿ ೬೦೦೦ ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ನೀಲಿ ವೃತ್ತ ನಿರ್ಮಿಸಿದ ವೈದ್ಯರ ಪರವಾಗಿ ಆರ್ ಎಸ್ ಎಸ್ ಡಿ ಐ ಮತ್ತು ರ್ಯಾನ್ ಬಾಕ್ಸಿ, ಡಯಾಬಿಟಿಸ್ ಪೀಡಿತ ಮಗುವನ್ನು ದತ್ತು ತೆಗೆದುಕೊಂಡು ಒಂದು ವರ್ಷದ ವರೆಗೆ ಅವರ ಇನ್ಸುಲಿನ್ ಅವಶ್ಯಕತೆಯನ್ನು ಪೂರೈಸಲಿವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com