ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ದೃಷ್ಟಿದೋಷ ನಿವಾರಣೆ: ಸಂಶೋಧನೆ

ದಿನನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಕಣ್ಣಿನ ಸಂಬಧಿತ ರೋಗಗಳಿಂದ ದೂರ ಇರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ...
ಬಾಳೆಹಣ್ಣು
ಬಾಳೆಹಣ್ಣು
Updated on

ಸಿಡ್ನಿ: ದಿನನಿತ್ಯ ಬಾಳೆಹಣ್ಣು ಸೇವಿಸುವುದರಿಂದ ಕಣ್ಣಿನ ಸಂಬಧಿತ ರೋಗಗಳಿಂದ ದೂರ ಇರಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಬಾಳೆಹಣ್ಣಿನಲ್ಲಿರುವ ಕ್ಯಾಟೋರಿನಾಯ್ಡ್ ಎಂಬ ದ್ರವ್ಯ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಈ ದ್ರವ್ಯ ಹಣ್ಣು ಮತ್ತು ತರಕಾರಿಗಳ ಬಣ್ಣ ಬದಲಾವಣೆಗೆ ಸಹಾಯ ಮಾಡುತ್ತದೆ.

ಹಾಗಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಈ ದ್ರವ್ಯ ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಇನ್ನೂ ಬಾಳೆಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಇದು ನಮ್ಮ ದೃಷ್ಟಿ ದೋಷಕ್ಕೆ ಉತ್ತಮವಾಗಿದೆ.

ಆಹಾರಗಳಲ್ಲೂ ಕೂಡ ಹೆಚ್ಚಿನ ಕ್ಯಾಟೋರಿನಾಯ್ಡ್  ಅಂಶ ಇದ್ದು, ಇದು ದೀರ್ಘಕಾಲದ ರೋಗಗಳಾದ ಕ್ಯಾನ್ಸರ್ , ಮಧುಮೇಹ, ಹಾಗೂ ಹೃದಯ ಸಂಬಂಧ ರೋಗಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂದು ಹಿಂದಿನ ಸಂಶೋಧನೆಗಳು ತಿಳಿಸಿದ್ದವು.

ಆದರೆ ಆಹಾರದಲ್ಲಿರುವಷ್ಟೇ ಪ್ರಮಾಣದ ಕ್ಯಾಟೋರಿನಾಯ್ಡ್  ಬಾಳೆಹಣ್ಣಿನಲ್ಲಿದೆ, ಇದು ದೃಷ್ಠಿ ದೋಷ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ.

ಕಣ್ಣಿನ ದೃಷ್ಠಿದೋಷಕ್ಕೆ ವಿಟಮಿನ್ ಎ ಕೊರತೆ ಕಾರಣವಾಗಿದ್ದು,  ಅದು ಬಾಳೆಹಣ್ಣಿನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಾಳೆ ಹಣ್ಣು ಸೇವನೆ ಉತ್ತಮವಾದದ್ದು ಎಂದು ಕ್ವೀನ್ಸ್ ಲ್ಯಾಂಡ್ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com