ಆಳಾಗಬಲ್ಲವನೇ ಒಳ್ಳೆ ಅರಸಾಗುವ ಎಂದಿದ್ದ ಅಣ್ಣಾವ್ರ ಮಾತು ಇಂದು ಅಕ್ಷರಶಃ ಸತ್ಯವಾಗಿದೆ.
ಮೂರು ದಿನಗಳ ಹಸಿವು ತಾಳಲಾರದೆ ಒಂದಾನೊಂದು ದಿನ ಬಸ್ಸಿನಲ್ಲಿ ಮಹಿಳೆಯೊಬ್ಬರ 50 ರುಪಾಯಿ ಕದ್ದಿದ್ದ, ಊಟ ತಿಂಡಿಗಾಗಿ ಎಲ್ಎಲ್ ಬಿ ಸ್ನೇಹಿತರನ್ನು ಹುಡುಕುತ್ತ ಕೋರ್ಟ್ ನ ಮೆಟ್ಟಿಲೇರುತ್ತಿದ್ದ, ಊರಿಗೆ ಹೋದಾಗ ಸ್ನೇಹಿತರು ಮತ್ತು ಸಂಬಂಧಿಕರ ವಕ್ರನೋಟಗಳಿಂದ ಚೂರುಚೂರಾಗುತ್ತಿದ್ದ, ಹೀಯಾಳಿಸುವ ಮಾತುಗಳನ್ನು ಕೇಳಿದರೂ ಕೇಳದಂತಿರುತ್ತಿದ್ದ...
12 ವರ್ಷ ಚಿತ್ರರಂಗದಲ್ಲಿ ಆಳಾಗಿ ದುಡಿದು ಹಾಳಾಗಿ ಹೋಗಬಹುದಾಗಿದ್ದ ಅರಸು ಅಂತಾರೆ, ಲವ್ ಇನ್ ಮಂಡ್ಯ ಚಿತ್ರದಿಂದ ಅರಸರಾಗಿದ್ದಾರೆ.
ಕನ್ನಡದಲ್ಲಿ ಸ್ವಂತ ಪ್ರತಿಭೆ ಇರುವ ನಿರ್ದೇಶಕರು ಕಡಿಮೆ ಎಂದು ಬೇರೆ ಭಾಷೆಗಳ ನಿರ್ದೇಶಕರನ್ನೇ ಅರಸಿಕೊಂಡಿದ್ದ ಕನ್ನಡದ ಪ್ರೇಕ್ಷಕನಿಗೆ ಅರಸು ಅಂತಾರೆ ಅಂತ ಒಬ್ಬ ಫ್ರೆಷ್ ನಿರ್ದೇಶಕ ಇದ್ದಾರೆ ಅಂತ ಗೊತ್ತಾಗಿದೆ. ಮಂಡ್ಯದ ಸಿಹಿಯನ್ನು ಲವ್ ಇನ್ ಮಂಡ್ಯದಲ್ಲಿ ತುಂಬಿದ ನಿರ್ದೇಶಕ ಅರಸು ಅಂತಾರೆ, ಏನಂತಾರೆ ಅಂತ ಇಲ್ಲಿದೆ. ಓದಿ.
ನಿಮಗೆ ಬಂದ ರಿಯಾಕ್ಷನ್ಸ್ ಹೇಗಿದೆ?
ಅರಸು ಅಂತಾರೆ: ಸೂಪರ್.
ಯಾವುದಾದರೂ ನೆನಪಿಡಲೇಬೇಕಿರುವಂತ ಪ್ರತಿಕ್ರಿಯೆ?
ಅರಸು: ನಿರ್ಮಾಪಕ ಉದಯ್ ಮೆಹ್ತಾ ಮತ್ತು ನನ್ನ ಅಮ್ಮ ವ್ಯಕ್ತಪಡಿಸಿದ ಖುಷಿ.
ಹೊಸ ನಿರ್ದೇಶಕನನ್ನು ಜನ ಮೆಚ್ಚಿದ್ದಾರೆ ಅನ್ಸುತ್ತಾ?
ಅರಸು: ಖಂಡಿತವಾಗಿ.
ಜನಕ್ಕೆ ಏನು ಇಷ್ಟವಾಗಿರಬಹುದು...ಅಂತ ನಿಮ್ಮ ಅಭಿಪ್ರಾಯ
ಅರಸು: ಸರಳತೆ ಮತ್ತು ತಾಜಾ ದೃಶ್ಯಗಳು.
ಕಲೆಕ್ಷನ್ಸ್ ಹೇಗಿದೆ?
ಅರಸು:ತುಂಬಾ ಚೆನ್ನಾಗಿದೆ, ಉತ್ತರ ಕರ್ನಾಟಕದಲ್ಲಿ ಕೂಡಾ.
ಪ್ರೊಡ್ಯೂಸರ್ ಖುಷಿಯಾಗಿರೋದು ಒಳ್ಳೆಯ ಸುದ್ದಿ, ಮುಂದಿನ ಫಿಲಂ ಅವರ ಜೊತೆಗೇನಾ..ಅಥವಾ ಬೇರೆ ಯಾವ ಯೋಜನೆ ಇದೆ?
ಅರಸು: ಸದ್ಯಕ್ಕೆ ಸ್ಟೋರಿ ಮೇಲೆ ಕೆಲ್ಸ ಮಾಡ್ತಿದೀನಿ, ನೋಡೋಣ.
ಲವ್ ಇನ್ ಮಂಡ್ಯ- ಎಷ್ಟು ಮಂದಿ ನಟವರ್ಗ...ಎಷ್ಟು ದಿನ ಚಿತ್ರೀಕರಣ ಮಾಡಿದ್ರಿ, ಎಷ್ಟು ಬಜೆಟ್ ಆಯ್ತು, ಎಷ್ಟು ದಿನ ಓಡಲಿದೆ?
ಅರಸು: 15 ಪಾತ್ರ, 46 ದಿನ, 2.5 ಕೋಟಿ, 50 ದಿನ ಖಚಿತ...ಮುಂದೆ ಜನ ತಗೊಂಡ್ ಹಾಗೆ.
ಚಿತ್ರರಂಗದಲ್ಲಿ ಎಷ್ಟು ವರ್ಷ ಸೈಕಲ್ ತುಳಿದಿದ್ದೀರಿ?
ಅರಸು: 12 ವರ್ಷಗಳ ಪರಿಶ್ರಮ.
ಇಂದು ಇಡೀ ಕರ್ನಾಟಕದ ಗಮನ ಸೆಳೆದಿರೋ ನಿರ್ದೇಶಕರು ನೀವು, ಈ ಮುನ್ನ ಆದ ಒಂದೆರಡು ಅವಮಾನದ ಕ್ಷಣಗಳನ್ನು ನೆನೆಯಬಹುದಾ...ಅಥವಾ ಹಸಿವಿನ ಕ್ಷಣಗಳನ್ನು...
ಅರಸು: ಒಂದು ದಿನ ಮೂರು ದಿನಗಳ ಹಸಿವು ತಾಳಲಾರದೆ ಬಸ್ಸಿನಲ್ಲಿ ಬೂಬಮ್ಮ ಹತ್ರ 50 ರುಪಾಯ್ ಕದ್ದಿದ್ದು, ಊಟ ತಿಂಡಿಗಾಗಿ ಎಲ್ಎಲ್ ಬಿ ಸ್ನೇಹಿತರನ್ನು ಹುಡುಕೊಂಡು ಕೋರ್ಟ್ ಗಳ ಹತ್ರ ಹೋಗ್ತಿದ್ದದ್ದು, ಊರಿಗೆ ಹೋದಾಗ ಸ್ನೇಹಿತರು ಮತ್ತು ಸಂಬಂಧಿಕರ ವಕ್ರವಾದ ಹೀಯಾಳಿಸುವಿಕೆಯ ಮಾತುಗಳು.
ಚಿತ್ರರಂಗಕ್ಕೆ ಹೇಗೆ ಪ್ರವೇಶ ಪಡೆದ್ರಿ...ಎಲ್ಲಿಂದ ಶುರು ಮಾಡಿದ್ರಿ. ಸಿನೆಮಾದ ಸೆಳೆತಕ್ಕೆ ಕಾರಣವೇನು...ಅಂದಹಾಗೆ, ನೀವು ಓದಿದ್ದೇನು ಎಲ್ಲಿ...
ಅರಸು: ಬಿ.ಎ. ಎಲ್ ಎಲ್ ಬಿ ಓದಿದ್ದು. ಬಿ.ಎ.ಓದಿದ್ದು ಹೆಚ್ ಕೆ ವೀರಣ್ಣಗೌಡ ಕಾಲೇಜು, ಎಲ್ ಎಲ್ ಬಿ ಓದಿದ್ದು ಮಂಡ್ಯದ ಪಿ ಇ ಎಸ್ ನಲ್ಲಿ.
ಸಿನೆಮಾದ ಸೆಳೆತಕ್ಕೆ ಕಾರಣ- ನಾನು ಸಮಾಜದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ. ಸಿನೆಮಾ ನಾನು ಚಿಕ್ಕ ವಯಸ್ಸಿನಿಂದಲೂ ತುಂಬಾ ಪ್ರೀತಿಸುತ್ತಾ ಬಂದದ್ದು. ಉಪೇಂದ್ರ ಅವರು ಬೆಳೆದು ಬಂದ ಬಗೆ ನನಗೆ ಸ್ಪೂರ್ತಿ.
ಯಾವ ಹಿನ್ನೆಲೆ ಮುನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ಮೊದಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸತ್ಯವಾನ್ ಸಾವಿತ್ರಿ ಚಿತ್ರಕ್ಕೆ. ನಂತರ ಮಾದೇಶ, ಕೆಂಚ, ಪ್ರೀತ್ಸೇ ಪ್ರೀತ್ಸೇ, ರಾಮ್, ಸಿದ್ಲಿಂಗು, ನೀರ್ದೋಸೆಗಳಲ್ಲಿ ದುಡಿಮೆ. ಸುರೇಶ್ ಗೋಸ್ವಾಮಿಯವರ ಮುಖಾಂತರ ಮಾದೇಶ್ ಅವರ ಪರಿಚಯ, ಪ್ರೀತ್ಸೇ ಪ್ರೀತ್ಸೇಯಲ್ಲಿ ನನ್ನ ಮತ್ತು ಅನೂಪ್ ಸೀಳಿನ್ ರ ಪರಿಚಯ, ಮಾತು, ಸ್ನೇಹ - ನಂದೇ ಈ ಲೋಕ ಹಾಡು ಮೊದಲು ಬರೆದದ್ದು. ಹೆಸರು ತಂದದ್ದು - ಸಿದ್ಲಿಂಗು ಚಿತ್ರದ - ಎಲ್ಲೆಲ್ಲೊ ಓಡುವ ಮನಸೇ ಹಾಡು.
12 ವರ್ಷದ ಈ ವನವಾಸದಲ್ಲಿ ಈಗ ಮೊಟ್ಟಮೊದಲ ಬಾರಿಗೆ ಜನಕ್ಕೆ ತೆರೆದುಕೊಳ್ಳುತ್ತಿದ್ದೀರಿ...ಮನೆಯಲ್ಲಿ ಪ್ರತಿಕ್ರಿಯೆ ಹೇಗಿದೆ, ಅಮ್ಮ ಏನಂತಾರೆ...
Advertisement