ಕತೆ ಸಂಕೀರ್ಣವಾದರೂ ಅದರ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ಮಾತ್ರ ನಾವು ಚಿತ್ರದಲ್ಲಿ ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ಇಲ್ಲಿ ಗಾಳಿಯನ್ನು ಭೌತಿಕವಾಗಿ ಚಿತ್ರದಲ್ಲಿ ತರಲು ಹೇಗೆ ಸಾಧ್ಯ? ಇಲ್ಲಿ ಗಾಳಿ ಎಂದರೆ ಗಂಡಸರ ಅಹಂ ಎಂಬ ಗಾಳಿ. ಅದನ್ನು ಕಿರಗೂರಿನ ಗಯ್ಯಾಳಿಯರು ತಹಬದಿಗೆ ತರುತ್ತಾರೆ. ಅದೊಂದು ಬದಲಾವಣೆಯ ಗಾಳಿ. ಕತೆ ತಾಂತ್ರಿಕವಾಗಿ ಸಂಕೀರ್ಣವಾಗಿಲ್ಲ. ಮನುಷ್ಯ ಸಂಬಂಧಗಳ ಸಂಕೀರ್ಣತೆ ಅದು. ಇವನ್ನೆಲ್ಲಾ ಬಿಡಿಸುತ್ತಾ, ಅರ್ಥಮಾಡಿಕೊಳ್ಳುತ್ತಾ ಹೋದಾಗ ಚಿತ್ರಗಳು ಹೊಳೆಯುತ್ತವೆ.