ಗಂಡನ ವರ್ತನೆಗೆ ಬೇಸತ್ತು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಗೃಹಿಣಿ

ಗಂಡನ ವರ್ತನೆಗೆ ಬೇಸತ್ತು ಗೃಹಿಣಿಯೊಬ್ಬರು ತಮ್ಮ ಮುದ್ದಾದ ಮಕ್ಕಳಿಬ್ಬರನ್ನು ನೇಣು ಬಿಗಿದು ಹತ್ಯೆ ಮಾಡಿ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ...
ಪತಿ ಮೃತಪಟ್ಟ ಗಂಗಾದೇವಿ, ಮಕ್ಕಳು
ಪತಿ ಮೃತಪಟ್ಟ ಗಂಗಾದೇವಿ, ಮಕ್ಕಳು
Updated on

ಬೆಂಗಳೂರು: ಗಂಡನ ವರ್ತನೆಗೆ ಬೇಸತ್ತು ಗೃಹಿಣಿಯೊಬ್ಬರು ತಮ್ಮ ಮುದ್ದಾದ ಮಕ್ಕಳಿಬ್ಬರನ್ನು ನೇಣು ಬಿಗಿದು ಹತ್ಯೆ ಮಾಡಿ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿಯ ಅಲೆಮಾರಿ ಜೀವನ ಮತ್ತು ಆರ್ಥಿಕ ಸಂಕಷ್ಟದಿಂದ ನೊಂದ 26 ವರ್ಷದ ಗಂಗಾದೇವಿ ಮಕ್ಕಳಾದ ಪಾಲ್ಪಸ (6) ಮತ್ತು ಪರ್ಬಲ್(3)ಗೆ ನೇಣು ಬಿಗಿದು ಹತ್ಯೆ ಮಾಡಿದ್ದಾರೆ. ಇನ್ನು ನೇಣು ಬಿಗಿದಿದ್ದ ಹಗ್ಗ ತುಂಡಾದ ಪರಿಣಾಮ 6 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ರಾಮಮೂರ್ತಿನಗರ ಸಮೀಪದ ಎನ್‌ಆರ್‌ಐ ಲೇಔಟ್‌ನಲ್ಲಿ ಸೋಮವಾರ ಮಧ್ಯಾಹ್ನ 12.30ರಲ್ಲಿ ಈ ದಾರುಣ ಘಟನೆ ನಡೆದಿದೆ. ನೇಪಾಳದ ಪದವೀಧರ ಪ್ರೇಮ್ ಎಂಬಾತ ಗಂಗಾದೇವಿಯನ್ನು ಮದುವೆಯಾಗಿದ್ದ. ಈ ದಂಪತಿಗೆ ಮೂವರು ಮಕ್ಕಳು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈತ ಒಂದೆಡೆ ನೆಲಸದೆ ಅಲೆಮಾರಿ ಜೀವನ ನಡೆಸುತ್ತಿದ್ದ. ಇದರಿಂದ ಬೇಸತ್ತ ಗಂಗಾದೇವಿ ಈ ನಿರ್ಧಾರಕ್ಕೆ ಬಂದಿದ್ದಾಳೆಂದು ಪ್ರೇಮ್ ವಿಚಾರಣೆಯಲ್ಲಿ ಹೇಳಿಕೆ ನೀಡಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಸತೀಶ್‌ಕುಮಾರ್ ತಿಳಿಸಿದ್ದಾರೆ.

ಮಕ್ಕಳನ್ನು ಹತ್ಯೆ ಮಾಡಿದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಪತಿ ಪ್ರೇಮ್ ವಿಚಾರಣೆ ನಡೆಸಲಾಗಿದೆ. ಆದರೆ, ಮೃತಳ ಸಂಬಂಧಿಕರು ಏನು ಹೇಳಿಕೆ ಕೊಡುತ್ತಾರೆ ಎಂಬುದನ್ನು ಪರಿಗಣಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com