ಚಾಮುಂಡಿ ಬೆಟ್ಟದಲ್ಲಿರುವ ದೈವಿ ವನ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಎಂ ಎಲ್ ಸಿ ಎಚ್ ವಿಜಯಶಂಕರ್ ಅವರ ಒತ್ತಾಯಕ್ಕೆ ಪ್ರತಿಕ್ರಯಿಸಿದ ಅವರು, ವಿಜಯಶಂಕರ್ ಅವರು ಧಾರ್ಮಿಕ ವ್ಯಕ್ತಿ ಆದರೆ, ನಾನು ನಂಬುವುದು ದೇವರು ನಮ್ಮ ಜೊತೆಯಲ್ಲಿದ್ದಾನೆಂದು. ಶ್ರೀಮಂತರು ದೇವಸ್ಥಾನ ಕಟ್ಟುತ್ತಾರೆ ಆದರೆ, ನನಗೆ ನನ್ನ ದೇಹವೇ ದೇಗುಲ ಎಂದು ಬಸವಣ್ಣನ ವಚನವನ್ನು ಹೇಳಿದ ಅವರು, ನಮಗೆ ಒಳ್ಳೆ ಹೃದಯವಿದ್ದರೆ, ದೇವರು ನಮ್ಮೊಂದಿಗೆ ಇರುತ್ತಾರೆ. ದೇವರನ್ನು ಮನದಲ್ಲಿ ಇಟ್ಟುಕೊಳ್ಳದೇ, ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿದರೇ ಏನು ಪ್ರಯೇಜನಾ ಎಂದು ಪ್ರಶ್ನಿಸಿದ್ದಾರೆ.