ಆದರೆ ಇದನ್ನು ವಿರೋಧಿಸಿದ ಲೋಕಾಯುಕ್ತ ಪರ ವಕೀಲ, ಶ್ರೀನಿವಾಸ ಅವರನ್ನು ಮುಕ್ತಗೊಳಿಸಲು ನೀಡಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಾಗಿ ಅನ್ವಯಿಸಲಾಗಿದೆ. ಅದಲ್ಲದೇ, ಕಟ್ಟಾ ಸುಬ್ರಮಣ್ಯ ಅವರು ಪ್ರಕರಣದ ಮೊದಲ ಆರೋಪಿ, ಅವರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಹಾಗಾಗಿ, ಅವರನ್ನು ಆರೋಪ ಮುಕ್ತಗೊಳಿಸಬಾರದು ಎಂದು ವಾದಿಸಿದರು.