ಪುತ್ರವಿಯೋಗ: ಸಿದ್ದರಾಮಯ್ಯಗೆ ನಟಿ ಖುಷ್ಬೂ ಸಾಂತ್ವನ

ಪುತ್ರ ಶೋಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಟಿ ಹಾಗೂ ಎಐಸಿಸಿ ವಕ್ತಾರೆ ಖುಷ್ಬೂ ಅವರು ಸಾಂತ್ವನ ಹೇಳಿದ್ದಾರೆ...
ಸಿದ್ದರಾಮಯ್ಯ-ಖುಷ್ಬೂ
ಸಿದ್ದರಾಮಯ್ಯ-ಖುಷ್ಬೂ

ಬೆಂಗಳೂರು: ಪುತ್ರ ಶೋಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಟಿ ಹಾಗೂ ಎಐಸಿಸಿ ವಕ್ತಾರೆ ಖುಷ್ಬೂ ಅವರು ಸಾಂತ್ವನ ಹೇಳಿದ್ದಾರೆ.

ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ ಖುಷ್ಬೂ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಸಿದ್ದರಾಮಯ್ಯನವರೊಂದಿಗೆ ಮಾತನಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖುಷ್ಪು ಅವರು ಸಿದ್ದರಾಮಯ್ಯನವರೆಗಿ ಸಾಂತ್ವನ ಹೇಳಲು ಚೆನ್ನೈನಿಂದ ಬಂದಿದ್ದೇನೆ. ಪುತ್ರ ಶೋಕಂ ನಿರಂತಂ ಎನ್ನುವ ಮಾತಿದೆ. ಅಂತೆ ಮಗನನ್ನು ಕಳೆದುಕೊಂಡಿರುವ ಸಿದ್ದರಾಮ್ಯನವರಿಗೆ ದುಖಃ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಶ್ರೀರಾಮುಲು, ಮಾಜಿ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಮತ್ತಿತರ ಕಾಂಗ್ರೆಸ್ ಹಾಗೂ ಬಿಚೆಪಿ ನಾಯಕರು ಸಿದ್ದರಾಮಯ್ಯನವರಿಗೆ ಸಾಂತ್ವನ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com