ರವಿಶಂಕರ್ ಅವರ ಸಹೋದರಿಯಿಂದ ನಾಗಪ್ರಸಾದ್ ಅವರು ನಿವೇಶನ ಖರೀದಿ ಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದರು. ಈ ವಿಚಾರದಲ್ಲಿ ತಕರಾರು ತೆಗೆದ ರವಿಶಂಕರ್ ಅವರ ಸಹೋದರಿಯರಾದ ಸುಜಾತ, ವಿಜಯಲಕ್ಷ್ಮಿ ಮತ್ತು ಬೆಂಬಲಿಗರು ಕಚೇರಿಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೊಪಿಸಿದ್ದು, ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಗಳನ್ನೂ ಸಹ ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ ತಮಗೆ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿದ್ದಾರೆ.