ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗವಿನಾಗಮಂಗಲ ರೈತ ಶಿವಣ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಡಿಜಿ, ಐಜಿಪಿ ಪುತ್ರನ ವಿರುದ್ಧ ಹೇಳಿಕೆ ನೀಡಿರುವ ಶಿವಣ್ಣ, ನಾನು ನನ್ನ ಸಹೋದರ ಲೋಕೇಶ್ ಮಧ್ಯ ಜಮೀನು ವಿವಾದ ಇತ್ತು. ಆದರೆ ಕಾರ್ತಿಕೇಶ್ ಲೋಕೇಶ್ ಜಮೀನಿನಲ್ಲಿ ತಮ್ಮ ಕ್ವಾರಿ ಜಮೀನಿಗೆ ವಿಸ್ತರಿಸಿದ್ದರಿಂದ ಅವರಿಗೆ ಬೆಂಬಲ ನೀಡುತ್ತಿದ್ದರು. ಅಲ್ಲದೆ ಲೋಕೇಶ್ ವಿರುದ್ಧ ಕೇಸ್ ದಾಖಲಾಗದಂತೆ ನೋಡಿಕೊಳ್ಳುವ ಮೂಲಕ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.