ರಾಣಿ ಅಬ್ಬಕ್ಕಾ ದೇವಿಯ ಕುಟುಂಬದ 29ನೇ ತಲೆಮಾರಿನ ಕುಲ್ದೀಪ್ ಅಬ್ಬಕ್ಕ ಪರವಾಗಿ ಬಲಿದಾನ ಸ್ಮರಣೆ ಗೌರವವನ್ನು ಸ್ವೀಕರಿಸಿದರು. ಅವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿ, 1888ರಲ್ಲಿ ರಚಿಸಲಾದ ವಂಶಾವಳಿಯ ಕರಡು ದಾಖಲೆಗಳನ್ನು ಹುಡುಕಿ ತೆಗೆದಿದ್ದು, ಅದನ್ನು ಕೋರ್ಟ್ ಗೆ ಸಲ್ಲಿಸಲಾಯಿತು. ತಮ್ಮ ಮುತ್ತಜ್ಜ 12 ವರ್ಷ ಕಾನೂನು ಹೋರಾಟ ನಡೆಸಿದರು. ಹೀಗಾಗಿ ಅದಕ್ಕೂ ಮೊದಲು ರಾಣಿ ಅಬ್ಬಕ್ಕನವರಿಗೆ ಸಂಬಂಧಪಡದ ಕುಟುಂಬಕ್ಕೆ ನೀಡಿದ್ದ ಪಟ್ಟ ಗೌರವವನ್ನು ನಂತರ ನಮ್ಮ ಮುತ್ತಜ್ಜರಿಗೆ ಕೊಡಲಾಯಿತು ಎಂದು ಸ್ಮರಿಸಿಕೊಂಡರು.