ಉಡುಪಿ: ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ, ಭಾಸ್ಕರ್ ಶೆಟ್ಟಿ ತಾಯಿ ಹಾಗೂ ಸಹೋದರನ ಡಿಎನ್ಎ ಪರೀಕ್ಷೆಗೆ ಉಡುಪಿ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.
ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಸೆಡ್ತಿ ಮತ್ತು ಸಹೋದರನ ಡಿಎನ್ ಎ ಪರೀಕ್ಷೆ ಮಾಡಲು ಅನುಮತಿಗಾಗಿ ಪೊಲೀಸರು ನ್ಯಾಯಾಲಯದ ಅನುಮತಿ ಕೋರಿದ್ದರು. ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ನದಿಯಿಂದ ಭಾಸ್ಕರ್ ಶೆಟ್ಟಿ ಮೂಳೆ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಕಳುಹಿಸಲಿದ್ದಾರೆ.
ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಅವರ ದೇಹವನ್ನು ಸುಡಲಾಗಿತ್ತು, ನಂತರ ಅವಶೇಷವನ್ನು ಸಮೀಪದ ನದಿಗೆ ಬಿಡಲಾಗಿತ್ತು.
ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಸೆಪ್ಟಂಬರ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಯನ್ನು ಮಂಗಳೂರು ಜೈಲಿಗೂ ಹಾಗೂ ಪುತ್ರ ನವನೀತ್ ಮತ್ತು ಸ್ವಘೋಷಿತ ಜ್ಯೋತಿಷಿ ನಿರಂಜನ್ ಭಟ್ ಇಬ್ಬರನ್ನು ಜಿಲ್ಲಾ ಕಾರಾಗೃಹದಲ್ಲಿಡಲಾಗಿದೆ.
Advertisement