ಬೆಂಗಳೂರು: ಅಕ್ರಮ ಭೂಕಬಳಿಕೆ ಆರೋಪ ಹೊತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ವಿಧಾನ ಸೌಧದಲ್ಲಿರುವ ರೆಕಾರ್ಡ್ ರೂಂ ಗೆ ಸೋಮವಾರ ಭೇಟಿ ನೀಡಿದ ಅಧಿಕಾರಿಗಳು ಭೂಅಕ್ರಮ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಿರುವ ರೆಕಾರ್ಡ್ ರೂಂ ನಿಂದ ಅಧಿಕಾರಿಗಳು ಕೆಲವೊಂದು ದಾಖಲೆ ಕಡತ ತೆಗೆದುಕೊಂಡು ಹೋದರೆಂದು ಮೂಲಗಳು ತಿಳಿಸಿವೆ.
ಎಸಿಬಿ ಅಧಿಕಾರಿಗಳು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ರೆವಿನ್ಯೂ ಇಲಾಖೆಗೂ ಭೇಟಿ ನೀಡಿದ ಅವರು, 2002 ರ ಆನೇಕಲ್ ನಲ್ಲಿ ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಖರೀದೀಸಿದ ಭೂಮಿಯ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರ 9 ಮಂದಿಗೆ ಹಂಚಿಕೆ ಮಾಡಿದ್ದ 8 ಎಕರೆ ಭೂಮಿಯನ್ನು ಜಾದವ್ ತಾಯಿ ಖರೀದಿಸಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಸಲ್ಲಿಸಿದ್ದ ದೂರಿನ ಅನ್ವಯ ಎಸಿಬಿ ಆಧಿಕಾರಿಗಳು ತನವಿಖೆ ಆರಂಭಿಸಿದ್ದಾರೆ.
Advertisement