ನಿಗದಿಗಿಂತ ಹೆಚ್ಚು ವೇಗವಾಗಿ ವ್ಯಾನನ್ನು ಚಾಲನೆ ಮಾಡುತ್ತಿದ್ದ ಆನಂದ್ ಮಕ್ಕಳನ್ನು ಮಧ್ಯಾಹ್ನ ಗಾಡಿಯಲ್ಲಿ ಹೇರಿಕೊಂಡು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೊದಲು ದ್ವಿಚಕ್ರ ವಾಹನಕ್ಕೆ, ನಂತರ ಆಟೋಗೆ ಹೋಗಿ ಢಿಕ್ಕಿ ಹೊಡೆದಿದ್ದಾನೆ. ನಂತರ ವಿಭಜಕಕ್ಕೆ ಹೋಗಿ ಢಿಕ್ಕಿ ಹೊಡೆದಿದ್ದಾನೆ. ಕೂಡಲೇ ಅಲ್ಲಿ ಸಾರ್ವಜನಿಕರು ಸೇರಿ ಮಕ್ಕಳನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಮಕ್ಕಳು ಭೀತರಾಗಿ ಅಳುತ್ತಿದ್ದರು.