ಬೆಂಗಳೂರು: ಕೇಂದ್ರ ಸರ್ಕಾರದ ನೋಟುಗಳ ಅಪಮೌಲ್ಯ ಸಣ್ಣ ಮತ್ತು ಮಧ್ಯಮ ವರ್ಗದ ಜನರಿಗೆ ತೀವ್ರ ಹೊಡೆತ ಬಿದ್ದಿದೆ. ದಿನಗೂಲಿ ಅಥವಾ ವಾರಗೂಲಿ ನೌಕರರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರು, ಬೇಕರಿಗಳಲ್ಲಿ ಕೆಲಸ ಮಾಡುವವರ ಮೇಲೆ ಇದು ತೀವ್ರ ಹೊಡೆತ ಬಿದ್ದಿದೆ.ಸರಿಯಾದ ಸಮಯಕ್ಕೆ ವೇತನ ಸಿಗದಿರುವುದು, ಚಿಲ್ಲರೆ ಸಮಸ್ಯೆ, ಅಕೌಂಟ್ ನಲ್ಲಿ ಹಣವಿದ್ದರೂ ತೆಗೆಯಲು ಸಾಧ್ಯವಾಗದಿರುವುದು ಸಂಕಷ್ಟಕ್ಕೆ ಸಿಲುಕಿಸಿದೆ.