ಚಿತ್ರದುರ್ಗ: ಚಳ್ಳಕೆರೆಯ ಸಾಮಾನ್ಯ ವ್ಯಕ್ತಿಯಾಗಿದ್ದ ಉದ್ಯಮಿ, ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ ಶ್ರೀಮಂತನಾಗಿ ಇದೀಗ ಸಿಬಿಐ ಕಸ್ಟಡಿಯಲ್ಲಿ ಬಂಧಿಯಾಗಿರುವುದರ ಹಿಂದೆ ಭಾರೀ ದೊಡ್ಡ ಕಥೆಯಿದೆ. ಅಡ್ಡದಾರಿ ಹಿಡಿದು ಒಮ್ಮೆಲೆ ಶ್ರೀಮಂತನಾದ ವೀರೇಂದ್ರ ಅಲಿಯಾಸ್ ಪಪ್ಪಿ ಇದೀಗ ಕಂಬಿ ಎಣಿಸುತ್ತಿದ್ದಾನೆ. ಹಣ ಮಾಡುವ ಎಲ್ಲಾ ಬಾಗಿಲುಗಳು ಮುಚ್ಚಿದಾಗ ಜೂಜು, ಕ್ರಿಕೆಟ್ ಬೆಟ್ಟಿಂಗ್ ಮೊದಲಾದ ಅಡ್ಡ ಹಾದಿ ಹಿಡಿದನು.