ಭೀಮಾ ನಾಯಕ್ ಡ್ರೈವರ್ ಆತ್ಮಹತ್ಯೆ ಪ್ರಕರಣ: ಸಂಸದ ಶ್ರೀರಾಮುಲು ಗನ್ ಮ್ಯಾನ್ ಸಿಐಡಿ ವಶಕ್ಕೆ

ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಕಾರು ಚಾಲಕ ರಮೇಶ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಸಂಸದ ಶ್ರೀರಾಮುಲು ಅವರ ಗನ್ ಮ್ಯಾನ್ ನನ್ನು ಸಿಐಡಿ...
ಶ್ರೀ ರಾಮುಲು
ಶ್ರೀ ರಾಮುಲು
Updated on

ಬೆಂಗಳೂರು: ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಕಾರು ಚಾಲಕ ರಮೇಶ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಸಂಸದ ಶ್ರೀರಾಮುಲು ಅವರ ಗನ್ ಮ್ಯಾನ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಮೇಶ್ ಕುಮಾರ್ ಆತ್ಮಹತ್ಯೆ ಗೂ ಮುನ್ನ ಬರೆದಿದ್ದ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಪುತ್ರಿ ಮದುವೆಗೆ ಕಪ್ಪು ಹಣವನ್ನು ಬಿಳಿ ಮಾಡಿಕೊಡಲು ಕಮಿಷನ್ ಆಧಾರದ ಮೇಲೆ ಭೀಮಾ ನಾಯಕ್ ಸಹಾಯ ಮಾಡಿದ್ದರು ಎಂದು ಬರೆದಿದ್ದರು. ಈ ಸಂಬಂಧ  ಶ್ರೀರಾಮುಲು ಗನ್‌ ಮ್ಯಾನ್‌ ಚನ್ನಪ್ಪ ಹೊಸಮನಿ ಅವರನ್ನು  ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ

ಭೀಮಾನಾಯಕ್, ತಮ್ಮ ಅಕ್ರಮದಿಂದ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ತಮ್ಮ ಮೇಲಿನ ಇಲಾಖಾ ತನಿಖೆಯಿಂದ ತಪ್ಪಿಸಿಕೊಳ್ಳಲು ಈ ಹಿಂದಿನ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜು ಅವರಿಗೆ 25 ಲಕ್ಷ ರೂ. ಲಂಚ ನೀಡಿದ್ದಾರೆ. ನ್ಯಾಯಾಧೀಶರನ್ನ ಭೇಟಿಯಾಗಿ ತಮ್ಮ ಮೇಲಿನ ಪ್ರಕರಣವನ್ನ ಮುಚ್ಚಿಹಾಕಲು ಅವರಿಗೂ ಲಂಚ ಕೊಟ್ಟಿದ್ದರು ಎಂದು ಡೆತ್‍ನೋಟ್‍ನಲ್ಲಿ ರಮೇಶ್ ಆರೋಪಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com